ಸುಂಟಿಕೊಪ್ಪ, ಜೂ. ೧೧: ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ನಡೆದ ದಕ್ಷಿಣ ಏಷ್ಯಾ ಸೆಸ್ಟೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಿನ್ನದ ಪದಕ ಗಳಿಸಿದೆ.

ಭಾರತ ತಂಡದಲ್ಲಿ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಇರ್ಷಾದ್ ಮುಸ್ತಫಾ ೨೦ ರಿಂದ ೨೪ ವಯೋಮಾನದ ವಿಭಾಗದ ಭಾರತ ತಂಡದಲ್ಲಿ ಸ್ಥಾನಪಡೆದು ಪ್ರತಿನಿಧಿಸಿದ್ದು, ಫೈನಲ್ ಪಂದ್ಯಾವಳಿಯು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದು ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಚಿನ್ನದ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇರ್ಷಾದ್ ಮುಸ್ತಫಾರವರು ಸುಂಟಿಕೊಪ್ಪ ನಿವಾಸಿ ದಿವಂಗತ ಜಾವಮನೆ ಮುಸ್ತಾಫ ಮತ್ತು ರಹಿಮತ್ ದಂಪತಿಯ ಪುತ್ರ.