ಮಡಿಕೇರಿ, ಜೂ. ೧೧: ಭಾರತೀಯ ಟಾರ್ಗೆಟ್ ಬಾಲ್ ಅಸೋಸಿಯೇಷನ್ & ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿರುವ ೧೧ನೇ ರಾಷ್ಟçಮಟ್ಟದ ಟಾರ್ಗೆಟ್ ಬಾಲ್ ಕ್ರೀಡಾಕೂಟಕ್ಕೆ ಮಡಿಕೇರಿಯ ಕೇಂದ್ರೀಯ ವಿದ್ಯಾಲಯದ ೧೦ನೇ ತರಗತಿಯ ವಿದ್ಯಾರ್ಥಿ ಕೆ.ಜೆ. ಆದಿತ್ಯ ರೈ ಆಯ್ಕೆಯಾಗಿದ್ದಾರೆ. ಇವರು ತರಬೇತುದಾರ ರಘು ಮಂಗಳೂರು ಇವರ ನೇತೃತ್ವದಲ್ಲಿ ತಾ.೧೩ ರಿಂದ ೧೫ ರವರೆಗೆ ರಾಜಸ್ಥಾನದಲ್ಲಿ ನಡೆಯುವ ೧೧ನೇ ರಾಷ್ಟçಮಟ್ಟದ ಟಾರ್ಗೆಟ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಮಡಿಕೇರಿಯ ಪೊಲೀಸ್ ಇಲಾಖೆಯ ರಾಷ್ಟç ಹಾಗೂ ಅಂತರರಾಷ್ಟಿçÃಯ ಕ್ರೀಡಾಪಟು ಕೆ.ಆರ್. ಜಿತೇಂದ್ರ ರೈ ಹಾಗೂ ಕೆ.ಜೆ. ಚೇತನ ರೈ ಅವರ ಪುತ್ರ.