ಸುAಟಿಕೊಪ್ಪ, ಜೂ.೧೧:ಕಂಬಿಬಾಣೆಯಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಹಾಗೂ ದೌರ್ಜನ್ಯ ಎಸಗಿದ ನಾಲ್ವರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಂಬಿಬಾಣೆ ಭೂದಾನ ಪೈಸಾರಿ ನಿವಾಸಿಯಾದ ಬಸವರಾಜ್ ಎಂಬಾತನ ಮೇಲೆ ಪ್ರವೀಣ್, ಚಿರಾಗ್, ಶಶಾಂಕ್, ಹರೀಶ್ ಎಂಬುವವರು ದೌರ್ಜನ್ಯ ಎಸಗಿದ್ದು, ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.