ಕರಿಕೆ, ಜೂ. ೧೨ : ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಖಾಸಗಿ ರೆಸಾರ್ಟ್ನ ವಿಸ್ತರಣೆಗೆ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕರಣ ದಾಖಲಾಗಿದೆ. ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ತ್ರಿಹಿಲ್ ರೆಸಾರ್ಟ್ನ ಒತ್ತಿನಲ್ಲಿ ನೂತನ ಕಾಟೇಜ್ ನಿರ್ಮಾಣಕ್ಕೆ ಕಾನೂನು ಬಾಹಿರವಾಗಿ ಅಕ್ರಮ ಮರ ಕಡಿದಿದ್ದು, ಬೃಹತ್ ಗಾತ್ರದ ಸಂಪಿಗೆ, ನೇರಳೆ ಸೇರಿದಂತೆ ಇತರ ಮರಗಳನ್ನು ಅನುಮತಿ ಪಡೆಯದೆ ಬುಡ ಸಮೇತ ಉರುಳಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಮಾ, ಉಪವಲಯ ಅರಣ್ಯ ಅಧಿಕಾರಿಗಳಾದ ಗಣಪತಿ, ವಿಕ್ರಮ, ನಾಗಮಣಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮರಗಳನ್ನು ವಶಕ್ಕೆ ಪಡೆದು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸುಧೀರ್ ಹೊದ್ದೆಟ್ಟಿ