ಮಡಿಕೇರಿ, ಜೂ. ೧೩: ಬೆಂಗಳೂರಿನ ಸೇನಾ ನೇಮಕ ಕಚೇರಿಯು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೨೭ ರಿಂದ ಜುಲೈ ೨ ರವರೆಗೆ ಆರು ದಿನಗಳ ಕಾಲ ಅಗ್ನಿವೀರ್ ನೇಮಕ ರ‍್ಯಾಲಿ ಆಯೋಜಿಸಿದೆ. ೨೦೨೪ ರ ಏ. ೨೨ ರಿಂದ ಮೇ ೭ ರವರೆಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಆಫೀಸ್ ಅಸಿಸ್ಟೆಂಟ್-ಸ್ಟೋರ್‌ಕೀಪರ್, ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್ ಹುದ್ದೆಗಳ ಭರ್ತಿಗೆ ಸೇನಾ ನೇಮಕಾತಿ ಸಾಮಾನ್ಯ ಪರೀಕ್ಷೆ (ಸಿಇಇ) ನಡೆಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಪುರುಷ ಅಭ್ಯರ್ಥಿಗಳು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಬೇಕು. ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಪ್ರವೇಶ ಪತ್ರ ಒದಗಿಸಲಾಗಿದೆ. ಅಲ್ಲದೆ, ರಿoiಟಿ iಟಿಜiಚಿಟಿ ಚಿಡಿmಥಿ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.