ವೀರಾಜಪೇಟೆ, ಜೂ. ೧೪ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಶಸ್ತç ಪಡೆ ಮಗ್ಗುಲ ಗ್ರಾಮಕ್ಕೆ ದೌಡಾಯಿಸಿ ಕಾಡಾನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು.

ನಾಡಿಗೆ ಬಂದಿರುವ ಕಾಡಾನೆ ಹಿಂಡುಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ತಕ್ಷಣವೇ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಗ್ರಾಮಸ್ಥರಿಗೆ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭ ಮಗ್ಗುಲ ಗ್ರಾಮಸ್ಥರಾದ ವಾಟೇರಿರ ರಾಜಪ್ಪ, ಕುಪ್ಪಚ್ಚಿರ ಸತೀಶ್, ಪುಲಿಯಂಡ ಜಗದೀಶ್, ಚೋಕಂಡ ಮಂದಣ್ಣ, ಹಮೀದ್ ಸೇರಿದಂತೆ ಇನ್ನಿತರರು ಇದ್ದರು.