ಸುAಟಿಕೊಪ್ಪ, ಜೂ. ೧೩: ಬಿದ್ದು ಸಿಕ್ಕಿದ ಹಣವನ್ನು ಆದರ ವಾರಸುದಾರರಿಗೆ ಹಸ್ತಾಂತರಿಸಿ ಆಶಾ ಕಾರ್ಯಕರ್ತೆ ಹಾಗೂ ಬೆಳೆಗಾರರೋರ್ವರು ಪ್ರಾಮಾಣಿಕತೆ ತೋರಿದ್ದಾರೆ.

ಗುರುವಾರದಂದು ಸುಂಟಿಕೊಪ್ಪದ ವಿಎಸ್‌ಎಸ್‌ಎನ್ ಮುಂಭಾಗದಲ್ಲಿ ರೂ. ೫೦೦ ಮುಖಬೆಲೆಯ ಒಟ್ಟು ರೂ. ೧೬,೦೦೦ ಕಂಬಿಬಾಣೆಯ ಆಶಾ ಕಾರ್ಯಕರ್ತೆ ವೀಣಾ ಮತ್ತು ಕಾಫಿ ಬೆಳೆಗಾರ ಸತೀಶ್ ಅವರಿಗೆ ಸಿಕ್ಕಿದ್ದು, ಅವರು ಅದನ್ನು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ತಿಳಿಸಿದ ಮೇರೆ ಸಾಮಾಜಿಕ ಜಾಲತಾಣದಲ್ಲಿ ಸುಂಟಿಕೊಪ್ಪ ಗ್ರಾ.ಪಂ. ನೌಕರ ಡಿ.ಎಂ. ಮಂಜುನಾಥ್ ಸುದ್ದಿ ಪಸರಿಸಿದ್ದಾರೆ.

ಸುಂಟಿಕೊಪ್ಪದ ಗಿರಿಯಪ್ಪ ಮನೆ ನಿವಾಸಿ ಯಂಕನ ಕೌಶಿಕ್ ಹಣ ಕಳೆದುಕೊಂಡವರಾಗಿದ್ದು, ತಮ್ಮ ಹಣದ ಲೆಕ್ಕಾಚಾರ ಮತ್ತು ಸೂಕ್ತ ದಾಖಲಾತಿಯನ್ನು ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಅವರ ಮುಂದೆ ಹಾಜರುಪಡಿಸಿ ಹಣವನ್ನು ಮರಳಿ ಪಡೆದು, ಹಣ ಹಿಂತಿರುಗಿಸಿದ ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.