ಬೆAಗಳೂರು, ಜೂ. ೧೩: ರಾಜ್ಯದ ವಕೀಲ ಸಮುದಾಯವನ್ನು ಸಂಭವನೀಯ ಹಲ್ಲೆ, ಬೆದರಿಕೆ, ಕಿರುಕುಳದಂತಹ ಕೃತ್ಯಗಳಿಂದ ರಕ್ಷಿಸಲು ರಾಜ್ಯ ಸರ್ಕಾರವು ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-೨೦೨೩' ಏಚಿಡಿಟಿಚಿಣಚಿಞಚಿ Pಡಿohibiಣioಟಿ oಜಿ vioಟeಟಿಛಿe ಚಿgಚಿiಟಿsಣ ಚಿಜvoಛಿಚಿಣes ಚಿಛಿಣ -೨೦೨೩(ಏPಗಿಂ ಚಿಛಿಣ) ಜಾರಿಗೆ ತಂದಿದೆ.

ಈ ಕುರಿತು ಜೂನ್ ೧೦ ರಂದು ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು ನೂತನ ಕಾಯ್ದೆ, ಆ ದಿನದಿಂದಲೇ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಅದರಂತೆ, ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ನಿಷೇಧಿಸಲಾಗಿದ್ದು, ಒಂದೊಮ್ಮೆ ಇಂತಹ ಕೃತ್ಯಗಳು ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ.

ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ, ವಕೀಲರು ಪ್ರತಿವಾದಿ ಕಕ್ಷಿದಾರರ ದುರುದ್ದೇಶಪೂರಿತ ಮತ್ತು ನಿಷ್ಪçಯೋಜಕ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ, ಅದು ಅವರ ಕರ್ತವ್ಯಗಳ ಕಾರ್ಯಕ್ಷಮತೆ ಮತ್ತು ನ್ಯಾಯದ ಆಡಳಿತಕ್ಕೆ ಅಡ್ಡಿಪಡಿಸುತ್ತದೆ ಎಂದು ಕಾನೂನಿನ ಹೇಳಿಕೆ ಮತ್ತು ವಸ್ತುಗಳು ಎತ್ತಿ ತೋರಿಸುತ್ತವೆ. ಈ ಕಾನೂನನ್ನು ಡಿಸೆಂಬರ್ ೧೧, ೨೦೨೩ ರಂದು ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದರು. ನಂತರ ಇದನ್ನು ಕರ್ನಾಟಕ ವಿಧಾನಸಭೆಯು ಡಿಸೆಂಬರ್ ೧೨, ೨೦೨೩ ರಂದು ಅಂಗೀಕರಿಸಿತು. ಮಾರ್ಚ್ ೨೦, ೨೦೨೪ ರಂದು ಕಾನೂನು ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಿತು.

ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧಿಗಳ ಶಿಕ್ಷೆ ಕುರಿತ ಎಂಟನೇ ವಿಶ್ವಸಂಸ್ಥೆಯ ಕಾಂಗ್ರೆಸ್ ಹವಾನಾ, ಕ್ಯೂಬಾದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾರತ ಭಾಗವಹಿಸಿತ್ತು, ಆ ಪ್ರಕಾರ ವಕೀಲರ ಪಾತ್ರದ ಮೂಲಭೂತ ತತ್ವಗಳನ್ನು ಈ ಕಾಯ್ದೆಯ ಮೂಲಕ ಅಳವಡಿಸಿಕೊಂಡಿದೆ ಎಂದು ನೂತನ ಕಾನೂನು ಎತ್ತಿ ತೋರಿಸುತ್ತದೆ.

ಈ ನೂತನ ಕಾಯ್ದೆಯು ವಕೀಲರು ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪರಹಿತವಾಗಿ ತಮ್ಮ ಎಲ್ಲ ವೃತ್ತಿಪರ ಕಾರ್ಯ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಸಬೇಕು, ವಕೀಲರು ದೇಶ ಮತ್ತು ವಿದೇಶ ಎರಡರಲ್ಲಿಯೂ ಮುಕ್ತವಾಗಿ ಪ್ರಯಾಣಿಸಲು ಮತ್ತು ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಸಾಧ್ಯವಾಗಬೇಕು. ವಕೀಲರು ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು, ಮಾನಕಗಳು ಮತ್ತು ನೈತಿಕತೆಗಳ ಅನುಸಾರ ತೆಗೆದುಕೊಂಡ ಕ್ರಮಕ್ಕಾಗಿ ಅಭಿಯೋಜನೆ/ಆಡಳಿತಾತ್ಮಕ, ಆರ್ಥಿಕ ಅಥವಾ ಇತರ ನಿರ್ಬಂಧಗಳನ್ನು ಅನುಭವಿಸತಕ್ಕದ್ದಲ್ಲ ಅಥವಾ ಭಯಪಡತಕ್ಕದ್ದಲ್ಲ ಎಂಬುದನ್ನು ಸರಕಾರ ಖಚಿತಪಡಿಸಬೇಕು. ವಕೀಲರ ತಮ್ಮ ಕರ್ತವ್ಯ ನಿರ್ವಹಣೆ ಮಾಡುವಾಗ ಅವರ ಭದ್ರತೆಗೆ ಬೆದರಿಕೆ ಒಡ್ಡಿದಾಗ ಸಂಬAಧಿಸಿದ ಪ್ರಾಧಿಕಾರಗಳು ಅವರನ್ನು ಸಂಪೂರ್ಣವಾಗಿ ಸಂರಕ್ಷಿಸಬೇಕು, ವಕೀಲರು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬAಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಿಗಾಗಿ ಅವರ ಮೇಲಿನ

(ಮೊದಲ ಪುಟದಿಂದ) ಹಿಂಸೆಯನ್ನು ನಿಷೇಧಿಸಿ ಅವರಿಗೆ ರಕ್ಷಣೆ ನೀಡುವುದು ಕಾಯ್ದೆಯ ಮೂಲ ಉದ್ದೇಶ ಆಗಿದೆ.

ವಕೀಲರ ವಿರುದ್ಧ ಅಪರಾಧ ಎಸಗುವ ಯಾವನೇ ವ್ಯಕ್ತಿ ಆರು ತಿಂಗಳಿAದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ. ೧ ಲಕ್ಷ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ ಎಂದು ಕಾನೂನು ಹೇಳಿದೆ. ಕಾಗ್ನಿಜೆಬಲ್ ಅಪರಾಧಕ್ಕೆ ಸಂಬAಧಿಸಿದAತೆ ವಕೀಲರನ್ನು ಬಂಧಿಸಿದಾಗ, ಪೊಲೀಸರು ಬಂಧಿಸಿದ ೨೪ ಗಂಟೆಗಳ ಒಳಗೆ, ಬಂಧಿತ ವಕೀಲರು ಸದಸ್ಯರಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಮಾಹಿತಿ ನೀಡಬೇಕಿದೆ. ಅದರ ಅಡಿಯಲ್ಲಿ ಶಿಕ್ಷಾರ್ಹವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆಯ ಜುಡಿಷಿಯಲ್ ಮ್ಯಾಜಿಸ್ಟೆçÃಟ್ ನ್ಯಾಯಾಲಯಕ್ಕಿಂತ ಕೆಳಗಿಲ್ಲದ ನ್ಯಾಯಾಲಯವು ವಿಚಾರಣೆ ನಡೆಸುತ್ತದೆ ಎಂದು ಕಾನೂನು ಹೇಳುತ್ತದೆ.

೨೦೨೦ರಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಕಡೆ ವಕೀಲರ ಮೇಲೆ ಹಲ್ಲೆ ನಡೆದ ಘಟನೆಗಳು ವರದಿಯಾಗಿದ್ದವು. ಹೆಚ್ಚಿದ ಹಲ್ಲೆ, ಕೊಲೆ ಹಿನ್ನೆಲೆ ವಕೀಲರ ರಕ್ಷಣ ಕಾಯ್ದೆ ರೂಪುಗೊಳ್ಳಬೇಕು ಎಂಬ ಬಲವಾದ ಒತ್ತಾಯ ವಕೀಲರ ಸಮುದಾಯದಲ್ಲಿ ಎದ್ದಿತ್ತು. ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯದ ವಿವಿಧ ವಕೀಲ ಸಂಘಟನೆಗಳು ಈ ಕುರಿತು ಸರಕಾರಗಳ ಗಮನ ಸೆಳೆದು ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಕರಡು ಮಸೂದೆ ರಚನೆಗೆ ನಿರ್ಧರಿಸಿದ್ದ ಬೆಂಗಳೂರು ವಕೀಲರ ಸಂಘ, ಹಿರಿಯ ವಕೀಲರಾದ ಉದಯ್ ಹೊಳ್ಳ, ಸಿ.ಹೆಚ್. ಹನುಮಂತರಾಯ, ವೀರಾಜಪೇಟೆಯ ಇಂದಿನ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಡಿ.ಆರ್. ರವಿಶಂಕರ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿಯು ರೂಪಿಸಿದ ಕರಡು ವಿಧೇಯಕವನ್ನು ೨೦೨೧ ರಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಈಗಾಗಲೇ ಕರ್ನಾಟಕದಲ್ಲಿ ವೈದ್ಯರು ಮತ್ತು ಪತ್ರಕರ್ತರಿಗೆ ಇದೇ ರೀತಿಯ ಕಾನೂನು ರಕ್ಷಣೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

- ಕೋವರ್‌ಕೊಲ್ಲಿ ಇಂದ್ರೇಶ್