ನಾಪೋಕ್ಲು, ಜು. ೭: ಕೊಡಗು ಸುನ್ನೀ ಜಂಈಯ್ಯತುಲ್ ಮುಹಲ್ಲಿಮೀನ್ ಕೇಂದ್ರ ಸಮಿತಿಯ ವತಿಯಿಂದ ಇಲ್ಲಿಗೆ ಸಮೀಪದ ಎಮ್ಮೆಮಾಡುವಲ್ಲಿ ಫಲಾನುಭವಿ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಸಮಸ್ತ ಶತಮಾನೋತ್ಸವದ ಪ್ರಯುಕ್ತ ೧೦೦ ಉಸ್ತಾದ್(ಮುಹಲ್ಲಿಂ)ಗಳಿಗೆ ಮನೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದ್ದು, ಅದರ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಎರಡು ಫಲಾನುಭವಿಗಳಿದ್ದಾರೆ. ಅದರಲ್ಲೊಬ್ಬರಾದ ಎಮ್ಮೆಮಾಡಿನ ನೌಶಾದ್ ಲತೀಫಿ ಅವರ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಕೂರ್ಗ್ ಜಂಈಯ್ಯತುಲ್ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಬಹುಃ ಅಶ್ರಫ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೊಡಗು ಜಂಈಯ್ಯತುಲ್ ಮುಹಲ್ಲಿಮೀನ್ ಕೋಶಾಧಿಕಾರಿ ಅಬ್ದುಲ್ಲ ಸಖಾಫಿ ಕೊಳಕೇರಿ, ಪರೀಕ್ಷಾ ವಿಭಾಗ ಕಾರ್ಯದರ್ಶಿ ಷಂಶುದ್ದೀನ್ ಅಂಜದಿ ಬಲಮುರಿ, ಜಿಲ್ಲಾ ನೇತಾರರಾದ ನಝೀರ್ ಸಖಾಫಿ ಕುಂಜಿಲ, ಹಂಝ ರಹ್ಮಾನಿ ಕಂಡಕರೆ ಸ್ಥಳೀಯ ಮುದರ್ರಿಸರಾದ ಹಂಝ ಸಖಾಫಿ ಮಲಪ್ಪುರಂ, ಖತೀಬರಾದ ಮುಹಮ್ಮದ್ ರಾಝಿಖ್ ಫೈಝಿ ಪಟ್ಟಾಂಬಿ ಹಾಗೂ ಸ್ಥಳೀಯ ಮುಸ್ಲಿಂ ಜಮಾಅತ್, ಎಸ್.ವೈ.ಎಸ್.ಎಸ್. ಹಾಗೂ ಎಸ್.ಎಫ್. ಸಂಘ ಕುಟುಂಬದ ನೇತಾರರು ಹಾಜರಿದ್ದರು.