ಶನಿವಾರಸಂತೆ, ಜು. ೭: ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಕಾಡಾನೆಗಳು ಸಂಚಾರಿಸುತ್ತಾ ರೈತರ ತೋಟ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ತಾ. ೫ ರಂದು ಎರಡು ಕಾಡಾನೆಗಳು ಮೆಣಸ-ಬೆಟ್ಟದಳ್ಳಿ ಗ್ರಾಮಗಳಿಂದ ಗಂಗಾವರ ಮೀಸಲು ಅರಣ್ಯ ದಾಟಿ ಬೈಸೂರು ಮೀಸಲು ಅರಣ್ಯ ಪ್ರದೇಶಕ್ಕೆ ಹೋಗಿದ್ದು, ಸಾರ್ವಜನಿಕರು ರಾತ್ರಿ ಹಾಗೂ ಬೆಳಗ್ಗಿನ ಜಾವ ಸಂಚರಿಸುವಾಗ ಜಾಗೃತರಾಗಿ ಸಂಚರಿಸಬೇಕು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.