ಕೂಡಿಗೆ, ಜು. ೮: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಬೆಂಗಳೂರಿನ ರಾಜಭವನದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದರು.

ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ ಅವರು ಸೈನಿಕ ಶಾಲೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಇದರೊಂದಿಗೆ ಶಾಲೆಯಲ್ಲಿನ ವಿವಿಧ ತರಬೇತಿ ಚಟುವಟಿಕೆಗಳು ಮತ್ತು ಕಳೆದ ವರ್ಷದಲ್ಲಿ ಶಾಲೆಯು ಸಾಧಿಸಿದ ಪ್ರಗತಿ ಕುರಿತು ವಿವರಿಸಿದರು. ರಾಜ್ಯಪಾಲರು ಭವಿಷ್ಯದ ನಾಯಕರನ್ನು ಬೆಳೆಸುವಲ್ಲಿ ಶಾಲೆಯು ಮಾಡಿದ ಪ್ರಯತ್ನಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.