ಮಡಿಕೇರಿ, ಜು. ೮: ಜಿಲ್ಲೆಯ ಮಡಿಕೇರಿ-ಸಿದ್ದಾಪುರ ಸಂಪರ್ಕ ಕಲ್ಪಿಸುವ ಚೆಟ್ಟಳ್ಳಿ ಸಮೀಪದ ಅಬ್ಯಾಲ ಜಲಪಾತ ಹಾಲ್ನೊರೆಯಂತೆ ಧುಮ್ಮಿಕ್ಕಿ, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಮಳೆಗಾಲದ ಮೂರ್ನಾಲ್ಕು ತಿಂಗಳು ಮಾತ್ರ ಅಬ್ಯಾಲ ಫಾಲ್ಸ್ನಲ್ಲಿ ನೀರು ಬಂಡೆ ಕಲ್ಲುಗಳು ನಡುವೆ ಹಾಲ್ನೊರೆಯಂತೆ ಹರಿದು ಮನಮೋಹಕ ವಾತಾವರಣವನ್ನು ಸೃಷ್ಟಿಸುತ್ತದೆ. ಮಡಿಕೇರಿ-ಸಿದ್ದಾಪುರ ರಸ್ತೆಯಲ್ಲಿ ಸಂಚರಿಸುವ ನೂರಾರು ಪ್ರವಾಸಿಗರು "ಅಬ್ಯಾಲ ಫಾಲ್ಸ್" ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. -ಚಿತ್ರ: ಸವಾದ್ ಉಸ್ಮಾನ್