ಸಿದ್ದಾಪುರ, ಜು. ೯: ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿಕೊಂಡ ಘಟನೆ ಮರಗೋಡುವಿನಲ್ಲಿ ನಡೆದಿದೆ. ಮೈಸೂರಿನಿಂದ ಮರಗೋಡುವಿಗೆ ತೆರಳುತ್ತಿದ್ದ ರಸಗೊಬ್ಬರ ತುಂಬಿದ್ದ ಲಾರಿ ಹೊಸ್ಕೇರಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ. ಲಾರಿ ಮಗುಚಿದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೆಲ ಸಮಯ ಮರಗೋಡು ಮಾರ್ಗದ ಸಂಚಾರ ಸ್ಥಗಿತಗೊಂಡಿತ್ತು.