ಕುಶಾಲನಗರ, ಜು. ೧೧: ರಾಷ್ಟಿçÃಯ ಸಹಕಾರ ಅಭಿವೃದ್ಧಿ ನಿಗಮ ನೀಡುವ ಸಹಕಾರಿ ಉತ್ಕೃಷ್ಟತೆ ಮತ್ತು ಶ್ರೇಷ್ಠತಾ ಪ್ರಶಸ್ತಿಯನ್ನು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸ್ವೀಕಾರ ಮಾಡಿದರು.

ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿರುವ ಸಂಘಕ್ಕೆ ಪ್ರಶಸ್ತಿ ಪತ್ರ, ಟ್ರೋಫಿ ಜೊತೆಗೆ ನಗದು ರೂ.೨೫,೦೦೦ ಪುರಸ್ಕಾರ ನೀಡಲಾಗಿದೆ.

ಬೆಂಗಳೂರಿನ ಪ್ರಾದೇಶಿಕ ಸಹಕಾರಿ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಪರವಾಗಿ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ನಿರ್ದೇಶಕ ಡಿ.ವಿ. ರಾಜೇಶ್, ಮುಖ್ಯ ಕಾರ್ಯ ನಿರ್ವಣಾಧಿಕಾರಿ ಬಿ.ಬಿ. ಲೋಕೇಶ್ ಹಾಗೂ ಕಾನೂನು ಸಲಹೆಗಾರರಾದ ಆರ್.ಕೆ. ನಾಗೇಂದ್ರಬಾಬು ಪುರಸ್ಕಾರವನ್ನು ಸ್ವೀಕರಿಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ರಾಜೇಂದ್ರ, ಹೆಚ್ಚುವರಿ ನಿಬಂಧಕ ವೈ.ಟಿ. ಅಶ್ವಿನಿ, ರಾಷ್ಟಿçÃಯ ಸಹಕಾರಿ ಅಭಿವೃದ್ಧಿ ನಿಗಮದ ಪ್ರಾದೇಶಿಕ ನಿರ್ದೇಶಕ ತನಿಷಾ ಲಾಲ್ ಇದ್ದರು.