ಶನಿವಾರಸಂತೆ, ಜು. ೧೧: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯ ಪ್ರೌಢಶಾಲೆ ಯಲ್ಲಿ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ಮುಖ್ಯಶಿಕ್ಷಕ ಅಭಿಲಾಷ್ ಚುನಾವಣಾ ಅಧಿಸೂಚನೆ ಘೋಷಣೆ ಮಾಡಿ, ಹಂತಹAತವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು. ಚುನಾವಣೆಯನ್ನು ಎವಿಎಂ ಮಾದರಿಯಲ್ಲಿ ೫ ಮೊಬೈಲ್ ಬಳಸಿ ನಡೆಸ ಲಾಗಿದ್ದು, ೩೪ ವಿದ್ಯಾರ್ಥಿಗಳು ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿ ದ್ದರು. ೪ ರಿಂದ ೧೦ ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಆಧಾರ್ ಗುರುತಿನ ಚೀಟಿಯೊಂದಿಗೆ ಬಂದು ಮತದಾನ ಮಾಡಿದರು. ಮತ ಎಣಿಕೆ ಕಾರ್ಯ ಮುಗಿದು ವಿಜೇತ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಲಾಯಿತು.

ಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಿ.ಜಿ. ಸುಖಾಂತ್ ಗೌಡ, ಉಪಾಧ್ಯಕ್ಷರಾಗಿ ಕೆ.ವಿ. ವಿಕಾಸ್, ಕಾರ್ಯದರ್ಶಿಯಾಗಿ ಬಿ.ಎನ್. ರೇಷ್ಮಾ, ಹಣಕಾಸು ಮಂತ್ರಿಯಾಗಿ ಕಲಂದರ್, ಕ್ರೀಡಾಮಂತ್ರಿಯಾಗಿ ಕೆ.ಬಿ. ಹರ್ಷ, ಸಾಂಸ್ಕೃತಿಕ ಮಂತ್ರಿಯಾಗಿ ಎಲ್.ಎಚ್. ಫಮಿಜಾ, ಆರೋಗ್ಯಮಂತ್ರಿಯಾಗಿ ವೈ.ಡಿ. ಪ್ರಜ್ಞನ್, ಆಹಾರ ಮಂತ್ರಿಯಾಗಿ ಡಿ.ವೈ. ಸುಪ್ರಿಯಾ, ತೋಟಗಾರಿಕಾ ಮಂತ್ರಿಯಾಗಿ ಡಿ.ಎನ್. ಅಕುಲ್ ದಾಸ್ ಆಯ್ಕೆಯಾದರು.

ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕ, ಸಹ ಶಿಕ್ಷಕರು, ಸಿಬ್ಬಂದಿ ಹಾಜರಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.