ಭಾಗಮಂಡಲ, ಜು. ೧೧: ಇಲ್ಲಿಗೆ ಸಮೀಪದ ಸಣ್ಣ ಪುಲಿಕೋಟು ಗ್ರಾಮದ ಭಗವತಿ ಮಂದತಿರುಕೆ ದೇವಾಲಯದ ಅರ್ಚಕರ ಮನೆಯ ಬಳಿ ಕಾಳಿಂಗ ಸರ್ಪ ಪತ್ತೆಯಾಗಿದೆ.

ವಿಷಯ ತಿಳಿದ ಗ್ರಾಮಸ್ಥರು ಮಡಿಕೇರಿಯ ಉರಗ ತಜ್ಞ ಕುಯ್ಯಮುಡಿ ಯದುಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು. ಒಂದು ವರ್ಷದ ಹಾವು ೧೨ ಅಡಿ ಉದ್ದ ಇತ್ತು. ಬಳಿಕ ಹಾವನ್ನು ಕಾಡಿಗೆ ಸುರಕ್ಷಿತವಾಗಿ ಬಿಡಲಾಯಿತು.