*ಗೋಣಿಕೊಪ್ಪ, ಜು. ೧೧: ಒಂದು ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಕೊಡವ ರೈಡರ್ಸ್ ಕ್ಲಬ್‌ನ ೬ನೇ ವಾರ್ಷಿಕೋತ್ಸವನ್ನು ಆಚರಿಸಲಾಯಿತು. ಹೆಬ್ಬಾಲೆ ದೇವರಪುರ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಲ್ಲಿನ ದೇವರಕಾಡುವಿನಲ್ಲಿ ಗಿಡಗಳನ್ನು ನೆಡಲಾಯಿತು.

ಕೊಡವ ರೈಡರ್ಸ್ ಕ್ಲಬ್ ತಂಡದೊAದಿಗೆ ತಿತಿಮತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಜಿಲ್ಲೆಯ ಬಾಂಡಿAಗ್ ಬ್ಲೂಮ್ ತಂಡದ ಸದಸ್ಯರು, ಯೋಗ ಟ್ರೆöÊಬ್ ಸದಸ್ಯರು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪದವಿ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಇಲ್ಲಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು, ಗೋಣಿಕೊಪ್ಪಲಿನ ಲಯನ್ಸ್ ವಿದ್ಯಾಸಂಸ್ಥೆ, ಕೂರ್ಗ್ ಪಬ್ಲಿಕ್ ಸ್ಕೂಲ್ (ಕಾಪ್ಸ್), ದೇವರಪುರ ರಾಜೇಶ್ವರಿ ವಿದ್ಯಾಸಂಸ್ಥೆ, ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆ, ವೀರಾಜಪೇಟೆಯ ತ್ರಿವೇಣಿ ಸ್ಕೂಲ್ ಸೇರಿದಂತೆ ಮೈಸೂರಿನ ಫೋನಿಕ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿ ಸ್ಕೂಲ್, ಬೆಂಗಳೂರಿನ ಟ್ರವೆಂಡರ್ ಸಂಸ್ಥೆಯ ಸದಸ್ಯರ ತಂಡ, ಮೈಸೂರಿನ ಎಸ್‌ವೈ ಫೋಟೋಗ್ರಾಫಿ ಸದಸ್ಯರ ತಂಡ, ಯೂನಿಬಿಕ್ಸ್ ಸ್ನಾö್ಯಕ್ಸ್ ಸದಸ್ಯರ ತಂಡ ಸೇರಿದಂತೆ ಕೊಡವ ರೈಡರ್ಸ್ ಕ್ಲಬ್ ತಂಡ ಭಾಗವಹಿಸಿತ್ತು. ಊರು ತಕ್ಕ ಸಣ್ಣುವಂಡ ವಸಂತ್ ಕುಶಾಲಪ್ಪ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು, ನಾಗರಹೊಳೆ ಎಸಿಎಫ್ ಕಂಬೇಯAಡ ಗೋಪಾಲ್, ತಿತಿಮತಿ ಆರ್‌ಎಫ್‌ಓ ಹೆಚ್.ಎಸ್ ಗಂಗಾಧರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಕೋಣೆರಿರ ನಾಣಯ್ಯ, ಸಮಾಜ ಸೇವಕ ಅಜ್ಜಿಕುಟ್ಟೀರ ಶಾಂತು ಚಿಣ್ಣಪ್ಪ, ಚಕ್ಕೇರ ಬಿಪಿನ್ ಅಚ್ಚಯ್ಯ, ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಚಮ್ಮಟೀರ ಪ್ರವೀಣ್ ಉತ್ತಪ್ಪ, ಸಣ್ಣುವಂಡ ದರ್ಶನ್ ಕಾವೇರಪ್ಪ, ಚೆನ್ನಪ್ಪಂಡ ಕಲ್ಪನ ತಿಮ್ಮಯ್ಯ ಇದ್ದರು.