ಮಡಿಕೇರಿ, ಜು. ೧೨: ಪ್ರಥಮ ಬಾರಿಗೆ ನಿಯೋಜನೆಗೊಂಡ ನೀಮಾ ಮೈಸೂರು ಪ್ರಾಂತ್ಯದ ಪದಾಧಿಕಾರಿಗಳ ನಿರ್ಣಯ ಸಭೆ ಮಡಿಕೇರಿಯಲ್ಲಿ ತಾ. ೧೪ ರಂದು ನಡೆಯಲಿದೆ.

ಮೈಸೂರು ಪ್ರಾಂತ್ಯಕ್ಕೆ ಸೇರುವ ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೀಮಾ ಪದಾಧಿಕಾರಿಗಳು, ಆಯುಷ್ ಅಧಿಕಾರಿಗಳು, ಆಯುಷ್ ಕಾಲೇಜಿನ ವ್ಯವಸ್ಥಾಪಕರು ಹಾಗೂ ಕೊಡಗಿನ ಆಯುಷ್ ವೈದ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಆಯುಷ್ ವೈದ್ಯರ ಕ್ಷೇಮ, ಅವರ ಸೇವೆಗಳಿಗೆ ಸಮಾಜದ ಗೌರವ, ಸಾರ್ವಜನಿಕರಿಗೆ ಸುಲಲಿತವಾಗಿ ಆರೋಗ್ಯ ಸೇವೆ ಕಲ್ಪಿಸಲು ವ್ಯವಸ್ಥೆ, ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮ, ಸರ್ಕಾರಿ ಆಯುಷ್ ವೈದ್ಯರಿಗೆ ಸಹಕಾರ, ಆಯುಷ್ ಕಾಲೇಜುಗಳಲ್ಲಿನ ಸಮಸ್ಯೆಗಳಿಗೆ ನೀಮಾ ರಾಷ್ಟಿçÃಯ ಸಂಘದ ಸಹಕಾರ, ಸಹಾಯ ಹಾಗೂ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಈ ಸಭೆ ನಿರ್ಣಯ ಕೈಗೊಳ್ಳಲಿದೆ.

ಸಾರ್ವಜನಿಕರು ಆಯುಷ್ ವೈದ್ಯರಿಂದ ಯಾವ ರೀತಿಯ ಸೇವೆಗಳನ್ನು ಅಪೇಕ್ಷಿಸುತ್ತಾರೆ ಎಂಬ ಬಗ್ಗೆ ಹಾಗೂ ಸಾಮಾಜಿಕ ಸೇವೆಗೆ ಸಲಹೆಗಳಿದ್ದರೆ ಇದೇ ಭಾನುವಾರ ಸಂಜೆ ೫ ಗಂಟೆಯೊಳಗೆ ೯೮೮೬೨೬೬೧೨೦ಗೆ ಸಂದೇಶ ಕಳುಹಿಸಿ ಸಹಕರಿಸುವಂತೆ ನೀಮಾ ಸಂಸ್ಥೆಯ ಪ್ರಕಟಣೆ ಕೋರಿದೆ.