ಮಡಿಕೇರಿ, ಜು. ೨೪: ನಾಯರ್ ಸೊಸೈಟಿಯ ಮಡಿಕೇರಿ ಘಟಕದ ವಾರ್ಷಿಕ ಮಹಾಸಭೆ ಲಕ್ಷಿö್ಮ್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಿತು.

ರಾಜ್ಯ ಸಮಿತಿಯಿಂದ ವೀಕ್ಷಕರಾಗಿದ್ದ ಗೋಪಿನಾಥ ನಾಯರ್ ಮತ್ತು ವೇಣುಗೋಪಾಲ ನಾಯರ್ ಅವರ ಉಪಸ್ಥಿತಿಯಲ್ಲಿ ಮಹಾಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಫ್.ಎಂ.ಸಿ. ಕಾಲೇಜಿನ ಹಿಂದಿ ಉಪನ್ಯಾಸಕ ಡಾ. ಶ್ರೀಧರ್ ಹೆಗ್ಡೆ ನಾಯರ್ ಸಮುದಾಯದ ಬಗ್ಗೆ ಮಾಹಿತಿ ನೀಡಿದರು.

ಮಡಿಕೇರಿ ನಾಯರ್ ಸೊಸೈಟಿಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಕೆ.ಕೆ. ಹರೀಶ್ ಕುಮಾರ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ರವಿ ನಾಯರ್ ಐಗೂರ್ ಹಾಗೂ ಕಾರ್ಯದರ್ಶಿಯಾಗಿ ಪ್ರೀಜಿತಾ ಶ್ರೀಧರನ್ ಮತ್ತು ಖಜಾಂಚಿಯಾಗಿ ಪಿ.ಟಿ. ಉತ್ತಮನ್ ನಾಯರ್ ಆಯ್ಕೆಗೊಂಡರು.

ನಾಯರ್ ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶೈಲಜಾ ನಾಯರ್, ಉಪಾಧ್ಯಕ್ಷರಾಗಿ ಸ್ರೀಲಾ ಮಹೇಶ್, ಕಾರ್ಯದರ್ಶಿಯಾಗಿ ದೀಪ ಉದಯಕುಮಾರ್, ಖಜಾಂಚಿಯಾಗಿ ರಾಧಾ ಮನೋಜ್ ಆಯ್ಕೆಯಾದರು.