ಶನಿವಾರಸಂತೆ, ಜು. ೨೪: ಎಸ್‌ಕೆಎಸ್‌ಎಸ್‌ಎಫ್ ಹಾಗೂ

ಎಸ್‌ವೈಎಸ್ ಕೊಡ್ಲಿಪೇಟೆ ಶಾಖೆ ವತಿಯಿಂದ ನೂರ್ ಮಹಲ್‌ನಲ್ಲಿ ಮಜ್ಲಿಸುನ್ನೂರ್ ಕಾರ್ಯಕ್ರಮ ಹಾಗೂ ಮಸ್ಜಿದುನ್ನೂರ್ ಜುಮಾ ಮಸೀದಿಯ ನೂತನ ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಸ್ಜಿದುನ್ನೂರ್ ಆಡಳಿತ ಸಮಿತಿ ನೂತನ ಅಧ್ಯಕ್ಷ ಸಿದ್ದೀಕ್ ಹಾಜಿ, ಉಪಾಧ್ಯಕ್ಷ ಡಿ.ಎ. ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಎಂ.ಎA. ಹನೀಫ್, ಕೋಶಾಧಿಕಾರಿ ಹೆಚ್.ಇ. ಬಾಸಿತ್, ಕಾರ್ಯದರ್ಶಿ ಬಿ.ಯು. ಮುನೀರ್, ಹಾಗೂ ಸಹಕಾರ್ಯದರ್ಶಿ ಅಬ್ದುಲ್ ರಶೀದ್ ಸೇರಿದಂತೆ ೮ ಮಂದಿ ಕಾರ್ಯಕಾರಿಣಿ ಸದಸ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ನೂತನವಾಗಿ ಆಯ್ಕೆಯಾದ ಸಲಹಾ ಸಮಿತಿಯ ಪದಾಧಿಕಾರಿಗಳಾದ ಹೆಚ್.ಈ. ಸುಲೈಮಾನ್, ಕೆ.ಕೆ. ಸುಲೈಮಾನ್ಹಾಜಿ, ಕೆ.ಎಂ. ಇಬ್ರಾಹಿಂ ಮಲ್ಲಳ್ಳಿ, ಡಿ.ಎ. ಸುಲೈಮಾನ್ ಮತ್ತು ಉಸ್ತಾದ್ ಕಾಫಿ ಫೈಝಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖತೀಬರಾದ ಶಾಫಿ ಪೈಝಿ ಪ್ರಾರ್ಥನೆ ನೆರವೇರಿಸಿದರು. ತಜಲಿಯತ್ ಮದರಸ ಮುಖ್ಯೋಪಾಧ್ಯಾಯ ರಝಾಕ್ ಫೈಝಿ, ಸ್ವಾಲಿಹ್ ರಹ್ಮಾನಿ, ರಶೀದ್ ಆಮೀನಿ, ಪ್ರಧಾನ ಕಾರ್ಯದರ್ಶಿ ಬಾಸಿತ್ ಹಾಜಿ, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಸಮಿತಿ ನೇತಾರರು, ಮತ್ತಿತರು ಭಾಗವಹಿಸಿದ್ದರು. ಝಹೀರ್ ನಿಝಾಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.