ಶ್ರೀಮಂಗಲ, ಜು. ೨೪: ಹರಿಯಾಣದಲ್ಲಿ ತಾ. ೨೫ ರಿಂದ ೨೮ ರವರೆಗೆ ನಡೆಯಲಿರುವ ೪೨ನೇ ಆವೃತ್ತಿಯ ರಾಷ್ಟಿçÃಯ ಸೀನಿಯರ್ ನೆಟ್‌ಬಾಲ್ ಚಾಂಪಿಯನ್ ಶಿಪ್‌ಗೆ ಕೊಡಗಿನ ಎಂ.ವಿ. ಮುತ್ತಮ್ಮ (ಸಂಜನಾ) ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಬೆಂಗಳೂರು ಡಾ. ಎನ್.ಎಸ್.ಎ.ಎಂ. ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಪೊರಾಡು ಗ್ರಾಮದ ಮೀದೇರಿರ ವಸಂತ ಮತ್ತು ಕವಿತಾ ದಂಪತಿ ಪುತ್ರಿ.