ಮಡಿಕೇರಿ, ಜು. ೨೫: ೩೩/೧೧ ಕೆವಿ ಮೂರ್ನಾಡು-ವೀರಾಜಪೇಟೆ ಮತ್ತು ೩೩/೧೧ಕೆವಿ ವೀರಾಜಪೇಟೆ-ಸಿದ್ದಾಪುರ ವಿದ್ಯುತ್ ಮಾರ್ಗಕ್ಕೆ ಬ್ರೇಕರ್ ಅಳವಡಿಸಲು ತಾ.೨೬ ರಂದು ಬೆಳಿಗ್ಗೆ ೯ ರಿಂದ ಸಂಜೆ ೩ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು.

ಸಿದ್ದಾಪುರ, ಇಂಜಿಲಗೇರಿ, ಮಾಲ್ದಾರೆ, ಗುಹ್ಯ, ನೆಲ್ಲಿಹುದಿಕೇರಿ, ಬಾಡಗಬಾಣಂಗಾಲ, ಪಾರಾಣೆ, ನಾಪೋಕ್ಲು, ಹೊದ್ದೂರು, ಮರಗೋಡು, ಮೂರ್ನಾಡು, ಹಾಕತ್ತೂರು, ಕಾಂತೂರು, ಹೊಡವಾಡ, ಚೆಯ್ಯಂಡಾಣೆ, ಕಕ್ಕಬೆ, ನೆಲಜಿ, ಪಾಲೂರು, ಯವಕಪಾಡಿ, ಬೇತು ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.