ಪೊನ್ನಂಪೇಟೆ, ಜು. ೨೫: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಸಮೀಪದ ಪೋಕಳತೋಡು ಬಳಿಯ ರಸ್ತೆಗೆ ಕೇರಳ ರಾಜ್ಯದ ಪಿಕಪ್ ವಾಹನದಲ್ಲಿ ( ಕೆ.ಎಲ್. ೫೮.ವೈ ೮೩೮೭) ಕಸ ತುಂಬಿದ ಚೀಲ ಎಸೆದು ಹೋಗಲು ಯತ್ನಿಸು ತ್ತಿದ್ದದ್ದನ್ನು ನೋಡಿದ ಪೊನ್ನಂಪೇಟೆಯ ಆಟೋ ಚಾಲಕ, ಸಾಹಿತಿ ಟಿ. ಆರ್. ವಿನೋದ್ ವಾಹನ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ನAತರ ರಸ್ತೆ ಬದಿಗೆ ಎಸೆದಿದ್ದ ಕಸ ತುಂಬಿದ ಚೀಲವನ್ನು, ಅದೇ ವಾಹನಕ್ಕೆ ಹಾಕಿಸಿ, ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಸಿ ಕಳುಹಿಸಿದರು.