ಸೋಮವಾರಪೇಟೆ, ಜು. ೨೭: ಇಲ್ಲಿನ ಚಾಮುಂಡೇಶ್ವರಿ ಬಳಗ ನೇತೃತ್ವದಲ್ಲಿ ಮೋಟಾರ್ ಯೂನಿಯನ್, ಕೆ.ಟಿ.ಡಿ.ಓ. ಸಹಯೋಗದೊಂದಿಗೆ ಪಟ್ಟಣದ ಕಾರು ನಿಲ್ದಾಣದಲ್ಲಿ ಎರಡನೇ ವರ್ಷದ ಆಷಾಢ ಮಾಸದ ಶುಕ್ರವಾರದ ಪೂಜೆ ನಡೆಯಿತು. ಕಾರು ನಿಲ್ದಾಣದಲ್ಲಿ ಅಳವಡಿಸಿದ್ದ ವೇದಿಕೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ, ಪೂಜೆ, ಹೋಮಗಳು ನಡೆದವು. ಪೂಜಾ ಕಾರ್ಯದ ನಂತರ ಸಾರ್ವಜನಿಕರಿಗೆ ಅನ್ನದಾನ ನೆರವೇರಿತು.

ಚಾಮುಂಡೇಶ್ವರಿ ಬಳಗದ ಪ್ರಮುಖರಾದ ರೋಹಿತ್ ನೇತೃತ್ವದಲ್ಲಿ, ಅರ್ಚಕರಾದ ನಿತಿನ್ ಪೂಜಾರಿ, ವಿನಯ್ ಪೂಜಾರಿ ಅವರುಗಳು ದುರ್ಗಾಹೋಮ ನಡೆಸಿದರು. ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮಾಜಿ ಅಧ್ಯಕ್ಷ ಕೆ.ಜಿ. ಸುರೇಶ್, ಕೆ.ಟಿ.ಡಿ.ಓ. ಸಂಘಟನೆಯ ತಾಲೂಕು ಅಧ್ಯಕ್ಷ ಬಿ.ವಿ. ರವಿ, ಖಜಾಂಚಿ ಕೆ.ಎನ್. ದೀಪಕ್ ಸೇರಿದಂತೆ ಇತರರು ಭಾಗವಹಿಸಿದ್ದರು.