ಮಡಿಕೇರಿ, ಆ. ೨೯: ಶತಮಾನೋತ್ಸವ ಸಂಭ್ರಮದಲ್ಲಿರುವ ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್‌ನಿಂದ ಸೆ.೩ ರಂದು ಮೂರ್ನಾಡಿನಲ್ಲಿ ಕೈಲ್ ಮುಹೂರ್ತ ಹಬ್ಬದ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಕ್ಲಬ್‌ನ ಅಧ್ಯಕ್ಷ ಮುಂಡAಡ ಪವಿ ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ೧೯೨೪ರಲ್ಲಿ ಸ್ಥಾಪನೆಯಾದ ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್ ಇದೀಗ ತನ್ನ ನೂರನೇ ವರ್ಷದ ಕ್ರೀಡಾಕೂಟವನ್ನು ವಿಶೇಷವಾಗಿ ಆಯೋಜಿಸಲು ಉದ್ದೇಶಿಸಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿದೆ.

ಕೈಲ್‌ಮುಹೂರ್ತ ಕ್ರೀಡಾಕೂಟವÀನ್ನು ಸೆ. ೩ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಎಸ್. ಸುಂದರರಾಜ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್., ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್. ಹರೀಶ್ ಪೂವಯ್ಯ, ಮಡಿಕೇರಿ ಗ್ರಾಮಾಡಳಿತ ಅಧಿಕಾರಿ ಅಕ್ಷತಾ ಬಿ. ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಆಟೋಟ ಸ್ಪರ್ಧೆಗಳು ಸಂಜೆ ೫.೩೦ ಗಂಟೆಯವರೆಗೆ ನಡೆಯಲಿದೆ ಎಂದು ಹೇಳಿದರು.

ಕ್ಲಬ್‌ನ ಶತಮಾನೋತ್ಸವ ಹಿನ್ನೆಲೆಯ ಕ್ರೀಡಾಕೂಟವಾದ್ದರಿಂದ ಈ ಬಾರಿ ವಿಶೇಷವಾಗಿ ಮೆರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿ ಸಲಾಗಿದೆ. ಕೊಂಡAಗೇರಿಯಿAದ ಕ್ರೀಡಾಂಗಣ ದವರೆಗಿನ ೫ ಕಿ.ಮೀ. ಅಂತರದ ಮ್ಯಾರಥಾನ್, ಬೇತ್ರಿಯಿಂದ ಕ್ರೀಡಾಂಗಣದವರೆಗಿನ ೫ ಕಿ.ಮೀ. ಅಂತರದ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದೆ.

ಕ್ರೀಡಾಕೂಟದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಪುರುಷರು, ಮಹಿಳೆಯರು, ಬಾಲಕರು, ಬಾಲಕಿಯರಿಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಮನರಂಜನಾ ಸ್ಪರ್ಧೆಗಳು, ವಾದ್ಯ ಕುಣಿತ ನಡೆಯಲಿದೆ.

ಕಾಂತೂರು, ಐಕೊಳ, ಕಿಗ್ಗಾಲು, ಬಾಡಗ, ಮುತ್ತಾರ್ಮುಡಿ ಮತ್ತು ಕೋಡಂಬೂರು ಗ್ರಾಮಸ್ಥರಿಗೆ ಸೀಮಿತವಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹಗ್ಗಜಗ್ಗಾಟ ಸ್ಪರ್ಧೆಯೊಂದನ್ನು ಹೊರತುಪಡಿಸಿ ಉಳಿದ ಸ್ಪರ್ಧೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬಹುದೆಂದು ನುಡಿದರು. ಸಂಸ್ಥೆಯ ಯಾವೆಲ್ಲ ಸದಸ್ಯರು ನಿರಂತರವಾಗಿ ಭತ್ತದ ಕೃಷಿಯನ್ನು ಮಾಡಿಕೊಂಡು ಬಂದಿದ್ದಾರೊ ಅವರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದು ಮುಂಡAಡ ಪವಿ ಸೊಮಣ್ಣ ಮಾಹಿತಿಯಿತ್ತರು.

ಗೋಷ್ಠಿಯಲ್ಲಿ ಸಹಕಾರ ಸ್ಪೋರ್ಟ್ಸ್ ಕ್ಲಬ್ ಗೌರವ ಕಾರ್ಯದರ್ಶಿ ಮೇರ್ಕಜೆ ಲೋಹಿತ್ ಸೋಮಯ್ಯ, ನಿರ್ದೇಶಕರಾದ ಮೂಡೇರ ಮನು ಮಾದಪ್ಪ, ಕೋಟೇರ ರಶ್ಯಾ ಮೇದಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ ಉಪಸ್ಥಿತರಿದ್ದರು.