ಮಡಿಕೇರಿ, ಆ. ೨೮: ವಿಶ್ವ ಹಿಂದೂ ಪರಿಷತ್, ರಾಷ್ಟಿçÃಯ ಸ್ವಯಂ ಸೇವಕ ಸಂಘ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಹಿಂದುತ್ವವನ್ನು ಉಳಿಸಿ ಬೆಳೆಸಲು ಹೋರಾಡುತ್ತಿವೆಯಾದರೂ ಇವುಗಳೊಂದಿಗೆ ಹಿಂದೂÄಗಳು ಕೂಡ ಹಿಂದುತ್ವದ ರಕ್ಷಣೆಗಾಗಿ ಒಗ್ಗಟ್ಟಾಗಬೇಕೆಂದು ಉಕ್ಕುಡ ರಾಜರಾಜೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹೆಚ್.ಎನ್. ಗೋವಿಂದಸ್ವಾಮಿ ಕರೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಮಡಿಕೇರಿ ಪ್ರಖಂಡದ ವತಿಯಿಂದ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಹಿಂದೂ ಧರ್ಮವನ್ನು ನಾಶಮಾಡಲು ಅನ್ಯಕೋಮಿನ ರಾಜರುಗಳು ಈ ಹಿಂದೆ ಹಲವು ಬಾರಿ ಪ್ರಯತ್ನಿಸಿದರೂ ಕೂಡ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಹಿಂದೂ ದೈವಗಳಿಗಿರುವ ಶಕ್ತಿ ಅಂತದ್ದು ಎಂದ ಅವರು, ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ಕೊಡುವುದರಿಂದ ಪ್ರತಿಯೊಬ್ಬರೂ ಬೆಳವಣಿಗೆ ಹೊಂದಲು ಸಾಧ್ಯವೆಂದರು. ದೇವರ ಬಗ್ಗೆ ಹೆಚ್ಚಿನ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದಾಗಿ ಕೋಪ ಕ್ರೌರ್ಯಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಗೋವಿಂದಸ್ವಾಮಿ ಸಲಹೆಯಿತ್ತರು.

‘ನಮ್ಮವರಿಂದಲೇ ನಮಗೆ ಕುತ್ತು’

ಅತಿಥಿಯಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಮಾತನಾಡಿ, ಸಮುದ್ರದಷ್ಟು ವಿಶಾಲವಾಗಿರುವ ಸನಾತನ ಧರ್ಮದ ಬಗ್ಗೆ ಅನ್ಯ ಧರ್ಮದವರಿಗಿಂತ ನಮ್ಮ ಧರ್ಮದವರೇ ಕೀಳಾಗಿ ಮಾತನಾಡುವ ಮೂಲಕ ಹಿಂದುತ್ವಕ್ಕೆ ಕುತ್ತುಂಟುಮಾಡುತ್ತಿರುವುದು ವಿಷಾದನೀಯ ಎಂದರು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮದ ರಕ್ಷಣೆಯ ಕುರಿತು ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಪ್ರಾಯೋಗಿಕವಾಗಿ ಕೆಲಸ ಮಾಡಿದರೆ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯ ಎಂದು ನುಡಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೂ ಅದರ ಬಗ್ಗೆ ಯಾರು ಧ್ವನಿ ಎತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ರಾಜಕೀಯಕ್ಕಾಗಿ ಇಂತವುಗಳನ್ನೆಲ್ಲಾ ಮುಚ್ಚಿಹಾಕಲಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯಬೇಕು. ಧರ್ಮಕ್ಕೆ ಧಕ್ಕೆಯಾದಾಗ ಎಲ್ಲರೂ ಒಗ್ಗಾಟ್ಟಾಗಬೇಕು. ೩ಏಳನೇ ಪುಟಕ್ಕೆ (ಮೊದಲ ಪುಟದಿಂದ) ಎಲ್ಲಾ ವರ್ಗದವರನ್ನು ಒಟ್ಟುಗೂಡಿಸಿಕೊಂಡು ಮುನ್ನಡೆದಾಗ ಮಾತ್ರ ಸನಾತನ ಧರ್ಮ ಎಂಬ ಪದಕ್ಕೆ ನಿಜವಾದ ಅರ್ಥ ಸಿಕ್ಕಂತಾಗುತ್ತದೆ ಎಂದು ರಾಜೇಂದ್ರ ಹೇಳಿದರು.

‘ನಮ್ಮತನವನ್ನು ನಾವು ಬಿಡಬಾರದು’

ಮತ್ತೋರ್ವ ಅತಿಥಿ ಆರ್ಥಿಕ ಸಲಹೆಗಾರರಾದ ಗೀತಾ ಗಿರೀಶ್ ಮಾತನಾಡಿ, ಎಂತÀಹ ಸಂದರ್ಭದಲ್ಲೂ ಕೂಡ ನಮ್ಮ ಧರ್ಮವನ್ನು, ನಮ್ಮ ತನವನ್ನು ನಾವು ಬಿಟ್ಟುಕೊಡಬಾರದು ಎಂದರು. ಪ್ರತಿಯೊಬ್ಬರಿಗೂ ಸಂಸ್ಕಾರ, ನಾಯಕತ್ವ ಗುಣ ಎಂಬುದು ಮನೆಯಿಂದಲೇ ಪ್ರಾಪ್ತಿಯಾಗುತ್ತದೆ. ಅದನ್ನು ಬಿಟ್ಟರೆ ವಿಹಿಂಪ ದಂತಹ ಸಂಘಟನೆಗಳು ಇಂತಹ ಗುಣಗಳನ್ನು ಕಲಿಸುತ್ತವೆ ಎಂದು ಅಭಿಪ್ರಾಯಿಸಿದರು. ವೈಭವೀಕರಣವನ್ನು ಬಿಟ್ಟು ಸರಳೀಕರಣವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಶ್ರದ್ಧೆಯಿಂದ ಸಲ್ಲಿಸುವ ಪ್ರಾರ್ಥನೆಯು ಭಗವಂತನಿಗೆ ತಲುಪುತ್ತದೆ ಎಂದು ನುಡಿದರು.

‘ನಮ್ಮನ್ನು ನಾವು ಸರಿಮಾಡಿಕೊಳ್ಳಬೇಕು’

ದಿಕ್ಸೂಚಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಡಿ. ನರಸಿಂಹ ಮಾತನಾಡಿ, ಹಿಂದುತ್ವದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು. ಹಿಂದೂ ಧರ್ಮವನ್ನು ರಕ್ಷಿಸುವುದು ಕೇವಲ ಹಿಂದೂ ಸಂಘಟನೆಗಳ ಕೆಲಸ ಎಂಬ ಮನೋಭಾವನೆಯನ್ನು ಬದಿಗಿಟ್ಟು, ಹಿಂದೂಗಳಾದ ನಾವು ನಮ್ಮನ್ನು ಸರಿಮಾಡಿಕೊಂಡು ಹಿಂದುತ್ವದ ರಕ್ಷಣೆಗೆ ಮುಂದಾಗಬೇಕು ಎಂದರು. ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಜಿಲ್ಲಾ ಬೌದ್ಧಿಕ ಪ್ರಮುಖ್ ಚಿ.ನಾ. ಸೋಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗಿನಲ್ಲಿ ವಿ.ಹಿಂ.ಪ. ನಡೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಹಿಂ.ಪ. ಮಡಿಕೇರಿ ನಗರ ಪ್ರಖಂಡದ ಅಧ್ಯಕ್ಷ ಕೆ.ಎನ್. ಗುರುಪ್ರಸಾದ್ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕೆಂದರು. ಸೋಮೇಶ್ ಅವರು ಬರೆದ ‘ಭಗವಂತನ ಬೆಳಕು ಭಾರತ’ ಪುಸ್ತಕವನ್ನು ಜಿ. ರಾಜೇಂದ್ರ ಅವರು ಅನಾವರಣಗೊಳಿಸಿದರು. ಓಂಕಾರ ರಾಮನಾಮ ಸ್ಮರಣೆ, ಪರಿಷತ್ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣ್ಯರು ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪನಮನಗೈದರು. ವಿ.ಹಿಂ.ಪ ಮಾತೃಶಕ್ತಿ ಪದಾಧಿಕಾರಿ ಪೂರ್ಣಿಮ ಸುರೇಶ್ ನಿರೂಪಿಸಿ, ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ರಮೇಶ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಸಂತೋಷ್ ವಂದಿಸಿದರು.