ಪೊನ್ನಂಪೇಟೆ, ಆ. ೨೯: ಪೊನ್ನಂಪೇಟೆ ತಾಲೂಕಿನ ಈಚೂರು ಗ್ರಾಮದ ಕಂಡಿಪಾಡಿ ಪವನ್ ಎಂಬುವವರ ಬಾಳೆ ತೋಟಕ್ಕೆ ಕಾಡಾನೆಗಳು ನುಗ್ಗಿ ಬಾಳೆ ತೋಟವನ್ನು ಧ್ವಂಸಗೊಳಿಸಿವೆ.

ಭತ್ತದ ಗದ್ದೆಗೂ ಕೂಡ ದಾಳಿ ನಡೆಸಿ ನಷ್ಟ ಉಂಟು ಮಾಡಿವೆ. ತಾ. ೨೮ ರಂದು ಸಂಜೆ ಆನೆಗಳನ್ನು ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಲು ಯತ್ನಿಸಿದರೂ ಆನೆಗಳ ಹಿಂಡು ಮತ್ತೆ ಈಚೂರು ಗ್ರಾಮದಲ್ಲಿ ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.