ಸೋಮವಾರಪೇಟೆ, ಆ. ೨೯: ಶಿವಮೊಗ್ಗದಲ್ಲಿ ನಡೆದ ೫ನೇ ಮುಕ್ತ ಅಂರ‍್ರಾಷ್ಟಿçÃಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸೋಮವಾರಪೇಟೆ ಕಿರಗಂದೂರು ಗ್ರಾಮದ ಅನರ್ಘ್ಯ ಪೂವಯ್ಯ ಕಂಚಿನ ಪದಕಕ್ಕೆ ಭಾಜನಳಾಗಿದ್ದಾಳೆ. ಶಿವಮೊಗ್ಗದ ಪ್ರೇರಣ ಆಡಿಟೋರಿಯಂನಲ್ಲಿ ನಡೆದ ಕರಾಟೆ ಪಂದ್ಯಾವಳಿಯ ಕುಮಿತೆ ಮತ್ತು ಕತಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ಈಕೆ ಕಿರಗಂದೂರು ಗ್ರಾಮದ ರೋಷನ್ ಹಾಗೂ ಚೈತ್ರ ದಂಪತಿ ಪುತ್ರಿ. ಪಟ್ಟಣದ ಕ್ರಿಯೇಟಿವ್ ಅಕಾಡೆಮಿಯಲ್ಲಿ ೨ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗೆ ಐಗೂರಿನ ಶೊಟೋಕನ್ ಕರಾಟೆ ಶಾಲೆಯ ಶಿಕ್ಷಕ ಸುದರ್ಶನ್ ಅವರು ತರಬೇತಿ ನೀಡಿದ್ದಾರೆ.