ಶನಿವಾರಸAತೆ, ಆ. ೨೯: ಜಿಲ್ಲೆಯ ಪ್ರಸ್ತುತ ಪರಿಸರ ಎಂದಿನAತೆಯೇ ನಿರಂತರ ಕಂಗೊಳಿಸುತ್ತಿರಬೇಕು ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಹೇಳಿದರು.

ಸ್ಥಳೀಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾನಶ್ರೀಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯಾಗಿ ಬಡ್ತಿ ಹೊಂದಿ ಮಡಿಕೇರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ರೈತರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ನಡೆಯಿತು.

ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರನ್ನು ಗಣನೆಗೆ ತೆಗೆದುಕೊಂಡು ಪರಿಸರ ಉಳಿಸುವ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಪ್ರತಿಯೊಬ್ಬರ ಜೀವದ ಉಳಿವಿಗೆ ಪ್ರಯತ್ನಿಸುತ್ತೇವೆ ಎಂದರು. ತಾಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಮಾತನಾಡಿದರು. ಪ್ರಗತಿಪರ ಕೃಷಿಕ ಕೆ.ಟಿ. ಹರೀಶ್, ರೈತ ಮುಖಂಡರಾದ ತೋಯಳ್ಳಿ ಸಂತೋಷ್, ಪ್ರಕಾಶ್, ಬಸವರಾಜ್ ಇತರರು ಹಾಜರಿದ್ದರು.