ಮಡಿಕೇರಿ, ಆ. ೨೯ : ವ್ಯವಸ್ಥಿತ ವಾಹನ ನಿಲುಗಡೆ ಉದ್ದೇಶಕ್ಕಾಗಿ ನಗರದಲ್ಲಿ ಮಾರ್ಕಿಂಗ್ ಸಂಬAಧ ಸರ್ವೆ ಕಾರ್ಯವನ್ನು ಸಂಚಾರಿ ಪೊಲೀಸರು ಕೈಗೊಂಡರು.

ನಗರದಲ್ಲಿ ಜನಸಂಪರ್ಕ ಸಭೆ ನಡೆಸಿದ್ದ ಸಂದರ್ಭ ಈ ಕುರಿತು ಸಲಹೆ ವ್ಯಕ್ತವಾದ ಹಿನ್ನೆಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸಲಹೆ ಮೇರೆಗೆ ಖಾಸಗಿ ಸಂಸ್ಥೆಯ ಮೂಲಕ ಮಾರ್ಕಿಂಗ್ ಕಾರ್ಯದ ಸರ್ವೆ ನಡೆಸಲಾಯಿತು. ಈ ಸಂದರ್ಭ ಸಂಚಾರಿ ಠಾಣೆಯ ಉಪನಿರೀಕ್ಷಕ ಶ್ರೀಧರ್, ಸಹಾಯಕ ನಿರೀಕ್ಷಕ ಐ.ಪಿ. ನಂದ ಹಾಜರಿದ್ದರು.