ಕಣಿವೆ, ಆ. ೨೮: ಹಿರಿಯರ ದಿನದ ಅಂಗವಾಗಿ ಕುಶಾಲನಗರದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಕೂಡಿಗೆಯಲ್ಲಿನ ವೃದ್ಧಾಶ್ರಮದ ಹಿರಿಯ ಜೀವ ಗಳೊಂದಿಗೆ ಸಮಯ ಕಳೆದರು.

ಲಯನ್ಸ್ ಅಧ್ಯಕ್ಷ ಡಾ. ಪ್ರವೀಣ್ ದೇವರಗುಂಡ ನೇತೃತ್ವದಲ್ಲಿನ ತಂಡ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಗಳು ಸಂತಸದಲ್ಲಿ ಸಮಯ ಕಳೆಯುವ ಬಗ್ಗೆ ಹಾಗೂ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಕುರಿತು ವೃದ್ಧಾಶ್ರಮದ ಮೇಲ್ವಿಚಾರಕ ಚಂದ್ರು ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಹಸ್ತಾಂತರಿಸಿದರು.

ಮುಪ್ಪು ಇಂದು ನಿಮಗೆ. ನಾಳೆ vನಮಗೆ. ಹಾಗಾಗಿ ಇರುವಷ್ಟು ದಿನಗಳ ಕಾಲ ನಿಶ್ಚಿಂತೆಯಿAದ ಕಾಲ ಕಳೆಯಬೇಕೆಂದು ಡಾ. ಪ್ರವೀಣ್ ಸ್ಥೆöÊರ್ಯ ತುಂಬಿದರು. ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಕಿರಣ್, ವಲಯಾಧ್ಯಕ್ಷ ಸುಮನ್ ಬಾಲಚಂದ್ರ, ನಿರ್ದೇಶಕ ಕೊಡಗನ ಹರ್ಷ ಇದ್ದರು.