ಸಿದ್ದಾಪುರ, ಆ. ೩೦: ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ಸಮರ್ಪಕವಾಗಿ ಪಡಿತರ ದೊರೆಯುತ್ತಿಲ್ಲ ಎಂಬ ದೂರಿನ ಮೇರೆಗೆ ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಸಿದ್ದಾಪುರದ ಫೆಡರೇಷನ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ವಿಳಂಬಮಾಡದೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ಫಲಾನುಭವಿಗಳು ವಂಚಿತರಾಗದAತೆ ಗಮನಹರಿಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ ೧೦ ರಿಂದ ೧ ರವರೆಗೆ ಮತ್ತು ಸಂಜೆ ೩ ರಿಂದ ೮ ರವರೆಗೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕಿ ಸೀನಾಕುಮಾರಿ, ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಆಡಳಿತ ಅಧಿಕಾರಿ ಓಮಪ್ಪ ಬಾಣಕರ್, ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಗೋಪಾಲ್, ಕಾರ್ಯದರ್ಶಿ ಮೋಹನ್, ಸದಸ್ಯ ಜಾಫರ್ ಆಲಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ, ಮಾಜಿ ಗ್ರಾ.ಪಂ. ಸದಸ್ಯ ಹುಸೈನ್ ಹಾಜರಿದ್ದರು.