ಮಡಿಕೇರಿ, ಆ. ೩೦: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ 'ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ ಬಗ್ಗೆ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವು ಮಡಿಕೇರಿಯ ಕೊಹಿನೂರು ರಸ್ತೆಯ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಚಿದಾನಂದಮೂರ್ತಿ ಅವರು ಹಾಜರಿದ್ದರು. ಪ್ರವರ್ತನ ಅಧಿಕಾರಿ ಸೌರಭ್, ಎಸ್.ಎಸ್.ಎ ಮೃದುಲ್ ಕೆ ರಮೇಶ್ ಹಾಗೂ ಪಿ.ಎಂ ಸ್ವಸ್ತಿಕ್ ಹಾಗೂ ರಾಹುಲ್ ರಾಣ, ಇ.ಎಸ್.ಐ.ಸಿ ವಿಭಾಗದ ಶಾಖಾಧಿಕಾರಿ ರವಿನಂದನ್ ಹೆಚ್. ಎಸ್ ಅವರುಗಳು ಮಾಹಿತಿ ನೀಡಿದರು.

ಉದ್ಯೋಗದಾತರು, ಉದ್ಯೋಗಿ ಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ಪಡೆದು ಕೊಂಡರು. ಪಿಂಚಣಿದಾರರ ಸಮಸ್ಯೆ ಗಳನ್ನು ಆಲಿಸಿ ಪರಿಹರಿಸಲಾಯಿತು.