ಗೋಣಿಕೊಪ್ಪಲು, ಆ. ೩೦: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೊಕ್ಯ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೃಷ್ಣ-ಬಲರಾಮ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದÀವು.

ಗೋಪೂಜೆ ನಡೆಸುವ ಮೂಲಕ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಶ್ರೀ ಕೃಷ್ಣನ ಜನ್ಮಾಷ್ಟಮಿಯ ವಿಶೇಷ ದಿನದಂದು ಪ್ರಮುಖವಾಗಿ ಶ್ರೀ ಕೃಷ್ಣನಿಗೆ ಆಘ್ರö್ಯ ಸಮರ್ಪಿಸುವ ಮೂಲಕ ಭಕ್ತರು ದೇವರ ಅನುಗ್ರಹÀಕ್ಕೆ ಪಾತ್ರರಾದರು. ಹಾಲಿನ ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಶ್ರೀ ಕೃಷ್ಣನ ಜನ್ಮಾಷ್ಟಮಿಯ ಕಾರ್ಯಕ್ರಮ ಅಂಗವಾಗಿ ಗೋಣಿಕೊಪ್ಪಲುವಿನ ಹಿರಿಯ ವೈದ್ಯ ಡಾ. ಶಿವಪ್ಪ, ಡಾ. ಚಂದ್ರಶೇಖರ್ ಹಾಗೂ ಪ್ರಮುಖರಿಂದ ದೇವಾಲಯದ ಆವರಣದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಗ್ರಾಮದ ಹಿರಿಯರು, ಶ್ರೀ ಕೃಷ್ಣನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯರಾದ ರಾಧಾಕೃಷ್ಣ, ದೇವಾ ಲಯದ ಉಸ್ತುವಾರಿಗಳಾದ ಚೆಪ್ಪುಡಿರ ಕಾರ್ಯಪ್ಪ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.