ಕುಶಾಲನಗರ, ಆ. ೩೦: ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟಿçÃಯ ಕ್ರೀಡಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ ಆರ್ ಶರವಣಕುಮಾರ್ ಚಾಲನೆ ನೀಡಿದರು. ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಛಾಯಾಗ್ರಾಹಕರ ಒಟ್ಟು ಆರು ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.

ಜಿಲ್ಲಾಧ್ಯಕ್ಷ ಆವರ್ತಿ.ಆರ್. ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಲವಕುಮಾರ್, ಸಂಘಟನಾ ಕಾರ್ಯದರ್ಶಿ ಸುಬ್ರಮಣಿ, ಉಪಾಧ್ಯಕ್ಷ ರೋಷನ್, ಕ್ರೀಡಾ ಕಾರ್ಯದರ್ಶಿ ಡ್ಯಾಡು ಜೋಸೆಫ್, ಮಾಜಿ ಜಿಲ್ಲಾಧ್ಯಕ್ಷ ವಸಂತ, ಕೆ.ಎಸ್.ನಾಗೇಶ್, ವಿಶ್ವ ಗುಡ್ಡೆಮನೆ, ವಿಜಯಕುಮಾರ್, ಪ್ರದೀಪ್ ಮತ್ತಿತರರು ಇದ್ದರು.