ಮಡಿಕೇರಿ, ಆ. ೩೦: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘ ನಿಯಮಿತ, ಗಾಂಧಿ ನಗರದ ವೀರಾಜಪೇಟೆ ವತಿಯಿಂದ ಸಂಘದ ಸದಸ್ಯರ ವಿದ್ಯಾರ್ಥಿ ಮಕ್ಕಳಿಗೆ ೨೦೨೪-೨೫ನೇ ಸಾಲಿನಲ್ಲಿ ಕೊಡುವ ಪ್ರೋತ್ಸಾಹ ಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಭಗವಾನ್ ಪ್ರೆಸ್, ಕಾರು ನಿಲ್ದಾಣದ ಎದುರು, ವೀರಾಜಪೇಟೆ ಇಲ್ಲಿಂದ ಪಡೆದುಕೊಂಡು ಸೆ. ೧೪ ರೊಳಗೆ ಹಿಂದಿನ ಸಾಲಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ ಹಾಗೂ ಈ ಸಾಲಿನಲ್ಲಿ ಓದುತ್ತಿರುವ ಬಗ್ಗೆ ಶಾಲಾ ದೃಢೀಕರಣ ಪತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಭಗವಾನ್ ಪ್ರೆಸ್‌ನಲ್ಲಿ ಹಿಂತಿರುಗಿಸಬಹುದಾಗಿದೆ.