ಚೆಯ್ಯಂಡಾಣೆ, ಆ. ೩೦: ಸುನ್ನಿ ಜಮಿಯತುಲ್ ಮೊಹಲಿಮ್ (ಎಸ್‌ಜೆಎಂ) ವತಿಯಿಂದ ಇತ್ತೀಚೆಗೆ ಅಗಲಿದ ಉಳ್ಳಾಲ ಸಂಯುಕ್ತ ಜಮಾಅತ್ ಖಾಝಿ ಖುರತುಸ್ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ ತಂಙಳ್ ಕೂರ ಇವರ ಹೆಸರಿನಲ್ಲಿ ಸಂಸ್ಮರಣ ಕಾರ್ಯಕ್ರಮ ಮೂರ್ನಾಡು ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಜೆಎಂ ಮೂರ್ನಾಡು ರೇಂಜ್ ಅಧ್ಯಕ್ಷ ಹನೀಫ್ ಸಖಾಫಿ ವಹಿಸಿದ್ದರು. ಮೂರ್ನಾಡು ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಝಾದ್‌ನಗರ ಖತೀಬ್ ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆಗೆ ಸಯ್ಯದ್ ಮಶೂದ್ ಅಲ್ ಬುಖಾರಿ ತಂಙಳ್ ನೇತೃತ್ವ ವಹಿಸಿದರು. ಎಸ್ ಜೆ ಎಂ ಮೂರ್ನಾಡು ರೇಂಜ್ ಪ್ರಧಾನ ಕಾರ್ಯದರ್ಶಿ ಶಂಸುದ್ದಿನ್ ಅಂಜ್ಞದಿ ಸ್ವಾಗತಿಸಿ, ಕೋಶಾಧಿಕಾರಿ ಹಸನ್ ಸಅದಿ ವಂದಿಸಿದರು.