ಗೋಣಿಕೊಪ್ಪಲು, ಆ. ೩೧: ವಿಶ್ವ ಹಿಂದೂ ಪರಿಷತ್‌ನ ೬೦ನೇ ವರ್ಷದ ಸಂಭ್ರಮದ ಅಂಗವಾಗಿ ವಿಶ್ವಹಿಂದೂ ಪರಿಷದ್ ಭಜರಂಗದಳ, ಮಾತೃಮಂಡಳಿ ದುರ್ಗಾವಾಹಿನಿ ಪೊನ್ನಂಪೇಟೆ ಪ್ರಖಂಡ ವತಿಯಿಂದ ೫ ವರ್ಷದೊಳಗಿನ ಪುಟಾಣಿ ಮಕ್ಕಳಿಗಾಗಿ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯು ಪೊನ್ನಂಪೇಟೆಯ ಮಹಿಳಾ ಸಮಾಜದ ಆವರಣದಲ್ಲಿ ಜರುಗಿತು.

ವಿಶ್ವಹಿಂದೂ ಪರಿಷದ್‌ನ ಪೊನ್ನಂಪೇಟೆ ಪ್ರಖಂಡದ ಅಧ್ಯಕ್ಷ ಪಂದ್ಯAಡ ಹರೀಶ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಾದ ಪರಹಿತನಂದಜೀ ಮಹಾರಾಜ್ ಆರ್ಶೀವಚನ ನೀಡಿದರು. ಮುಖ್ಯ ಭಾಷಣಕಾರರಾಗಿ ವಿಶ್ವಹಿಂದೂ ಪರಿಷದ್‌ನ ಕೊಡಗು ಜಿಲ್ಲಾ ಸಹಕಾರ್ಯದರ್ಶಿ ಡಿ. ಸಂತೋಷ್ ಭಾಗವಹಿಸಿದ್ದರು. ವಿಶ್ವಹಿಂದೂ ಪರಿಷದ್‌ನ ಜಿಲ್ಲಾಧ್ಯಕ್ಷರಾದ ಸಿ.ಕೆ. ಬೋಪಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬಲ್ಲಣಮಾಡ ರೀಟಾ ದೇಚಮ್ಮ, ನಿವೃತ್ತ ಯೋಧರಾದ ಹೆಚ್.ಎ. ಪ್ರಭು, ದುರ್ಗಾವಾಹಿನಿಯ ಜಿಲ್ಲಾ ಸಂಚಾಲಕಿ ರಿಸ್ತಾ ಚಂಗಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತದ್ದರು. ಪ್ರಖಂಡದ ಪ್ರಮುಖರಾದ ಅಮ್ಮತ್ತಿರ ಆರತಿ ಸುರೇಶ್ ಪ್ರಾರ್ಥಿಸಿ, ವಕೀಲ ಸಂಜೀವ ಸ್ವಾಗತಿಸಿ, ಸುಬ್ರಮಣ್ಯ ಹಾಗೂ ರಿಸ್ತಾ ಚಂಗಪ್ಪ ನಿರೂಪಿಸಿ, ವಿಶ್ವಹಿಂದೂ ಪರಿಷದ್‌ನ ಪೊನ್ನಂಪೇಟೆ ಪ್ರಖಂಡದ ಕಾರ್ಯದರ್ಶಿ ಅಮ್ಮತ್ತಿರ ಸುರೇಶ್ ವಂದಿಸಿದರು.