ಸೋಮವಾರಪೇಟೆ, ಆ. ೩೧: ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳದೇ ಹೋದರೆ ಅವರುಗಳು ಕಲಿಯುವ ಶಿಕ್ಷಣ ವ್ಯರ್ಥವಾದಂತೆ ಎಂದು ವೀರಾಜಪೇಟೆ ಸೆಂಟ್ ಆ್ಯನ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ರೆ.ಫಾ. ಮದಲೈ ಮುತ್ತು ಅಭಿಪ್ರಾಯಿಸಿದರು.

ಇಲ್ಲಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಪದವಿ ಪೂರ್ವ ಕಾಲೇಜು ವಿಭಾಗದಿಂದ ಸ್ಥಳೀಯ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿದ್ದ ೨೦೨೪-೨೫ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸತತ ಪರಿಶ್ರಮ, ಗುರಿ, ಜಾಗ್ರತೆ, ಒಳ್ಳೆತನ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪ್ರತಿದಿನ ಕಲಿಕೆಯೊಂದಿಗೆ ವಿದ್ಯಾರ್ಥಿ ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿAದ ಅನುಭವಿಸಬೇಕು. ಶಿಸ್ತು ಮೈಗೂಡಿಸಿಕೊಳ್ಳಬೇಕು. ನಾಯಕತ್ವಕ್ಕೆ ಉತ್ತಮ ನಡವಳಿಕೆಯೇ ಅಡಿಪಾಯ ಎಂದು ತಿಳಿ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಓಎಲ್‌ವಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜೋಶ್ನಾ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಗುರಿಯತ್ತ ಮುನ್ನಡೆಯಬೇಕು. ಪೋಷಕರ ನಂಬಿಕೆಗಳನ್ನು ಹುಸಿಗೊಳಿಸಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಫಾ. ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಸದ್ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಂತಹ ಸಂದರ್ಭದಲ್ಲೂ ಸಮಯದ ವ್ಯರ್ಥ ಸಲ್ಲದು. ನಾಟಕೀಯತೆಗಿಂತ ವಾಸ್ತವತೆಯಲ್ಲಿ ಬದುಕಬೇಕು. ಪೋಷಕರ ಪರಿಶ್ರಮ ವ್ಯರ್ಥವಾಗದಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಚರ್ಚ್ನ ಆಡಳಿತ ಮಂಡಳಿ ಸದಸ್ಯ ವಿನ್ಸಿ ಡಿಸೋಜ, ಪದವಿ ಕಾಲೇಜು ಪ್ರಾಂಶುಪಾಲ ಹರೀಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಥೋಮಸ್ ಅಂತೋಣಿ, ಪ್ರೌಡಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್ ಅವರುಗಳು ಉಪಸ್ಥಿತರಿದ್ದರು.

ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎಂ. ದಿವಿನ್, ಕಾರ್ಯದರ್ಶಿಯಾಗಿ ಹಿತೈಷಿ, ಕ್ರೀಡಾ ಸಮಿತಿಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ನಿತ್ಯಾ, ಸಾಂಸ್ಕೃತಿಕ ಸಮಿತಿಯ ನೀತಾ-ಶಾನ್ ಗೌಡ, ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಇಂದುನಾಥ್-ಉಪಾಧ್ಯಕ್ಷರಾಗಿ ರಿಶಾಲ್ ಸಿಕ್ವೇರಾ, ಸ್ವಚ್ಛತಾ ಸಮಿತಿಗೆ ಪ್ರಜ್ಞಾ-ಸೃಜನ್, ಎನ್‌ಎಸ್‌ಎಸ್ ನಾಯಕನಾಗಿ ಸೃಜನ್- ಉಪ ನಾಯಕಿಯಾಗಿ ಹರ್ಷಿತ, ರೆಡ್ ಕ್ರಾಸ್ ಸಮಿತಿಗೆ ಯೋಗೇಶ್ವರ್-ದೀಪಾಲಿ, ಇ.ಎಲ್.ಸಿ. ಸಮಿತಿಗೆ ಪ್ರನೂಶ್-ವಿಯೋಲಿನ್ ಲೋಬೋ, ರೋರ‍್ಸ್ ಕ್ಲಬ್‌ಗೆ ವೈಭವ್, ರೇಂರ‍್ಸ್ ಕ್ಲಬ್‌ಗೆ ಆದ್ಯಾ, ಇಕೋ ಕ್ಲಬ್‌ಗೆ ತನ್ಮಯ್-ಜೆಸ್ವಿನ್, ರೆಡ್ ಹೌಸ್‌ಗೆ ಮೋಕ್ಷಿತ್, ಗ್ರೀನ್ ಹೌಸ್‌ಗೆ ಹರಿಣಿ, ಬ್ಲೂ ಹ್ಸೌಸ್‌ಗೆ ನಂದಿನಿ, ಯೆಲ್ಲೋ ಹೌಸ್‌ಗೆ ಅಮೃತ ಅವರುಗಳು ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಿದರು.

ಇದರೊಂದಿಗೆ ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ನಿಖಿಲೇಶ್, ರತನ್, ವೇದಿತ, ಸಂಜಯ್, ರಿತು, ನಿತಿನ್, ವೈಷ್ಣವಿ, ಕುಶಾಲ್, ಧನ್ಯ, ವೆಂಕಟೇಶ್, ತೌಫೀನಾ, ಮಾನಸ ಅವರುಗಳು ಆಯ್ಕೆಯಾಗಿದ್ದು, ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರುಗಳಿಗೆ ಫಾ. ಅವಿನಾಶ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರುಗಳಾದ ಕಲ್ಪನಾ, ಸೋನಿ, ದೀಪ್ತಿ, ಗಾನವಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.