ಮಡಿಕೇರಿ, ಆ. ೩೧: ವಿಶ್ವ ಹಿಂದೂ ಪರಿಷದ್ ಸ್ಥಾಪನಾದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ಸಿದ್ಧಾಪುರ ನಗರದಲ್ಲಿ ಸೆಪ್ಟೆಂಬರ್ ೧ರಂದು (ಇಂದು) ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ದುರ್ಗಾಭಗವತಿ ದೇವಾಲಯದ ಮುಂಭಾಗದಲ್ಲಿ ಗೋಪೂಜೆ ನಡೆಯಲಿದೆ. ನಂತರ ೧೧ ಗಂಟೆಗೆ ದೇವಾಲಯದ ಮುಂಭಾಗದಿAದ ಸಿದ್ಧಾಪುರ ನಗರಕ್ಕೆ, ವಾದ್ಯಮೇಳಗಳೊಂದಿಗೆ, ಶ್ರೀಕೃಷ್ಣ-ರಾಧೆಯ ವೇಷಧಾರಿ ಮಕ್ಕಳು ಹಾಗೂ ಸಾರ್ವಜನಿಕರಿಂದ ಸಿದ್ದಾಪುರ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸಿದ್ದಾಪುರ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.