ಸುಂಟಿಕೊಪ್ಪ, ಆ. ೩೧: ಮಾದಾಪುರ ಎಸ್‌ಜೆಎಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಜಗದ್ಗುರು ಜಯದೇವ ಸ್ವಾಮೀಜಿ ಅವರ ೧೫೦ನೇ ಜನ್ಮದಿನವನ್ನು ಆಚರಿಸಲಾಯಿತು.

ಎಸ್‌ಜೆಎಂ ಕಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶ್ರೀ ಜಗದ್ಗುರು ಜಯದೇವ ಸ್ವಾಮಿಗಳ ೧೫೦ನೇ ಜನ್ಮದಿನದ ಸಮಾರಂಭ ವನ್ನು ಆಯೋಜಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ಚೆಸ್ಕಾಂನ ಕಿರಿಯ ಅಭಿಯಂತರರಾದ ಮಹದೇವ್ ಪ್ರಸಾದ್ ಶ್ರೀ ಜಗದ್ಗುರು ಜಯದೇವ ಅವರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭ ಸ್ವಾಮಿಗಳ ೧೫೦ನೇ ಜನ್ಮದಿನದ ಅಂಗವಾಗಿ ಎಸ್‌ಜೆಎಂ ಶಾಲಾ ವತಿಯಿಂದ ಮಾದಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕ ರಾಗಿರುವ ಗಣೇಶ್ ಮತ್ತು ಸಿದ್ದಿಕ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ ಶಿಕ್ಷಕರು ಪ್ರಿಯ ಮತ್ತು ಪ್ರಜ್ಞಾ ರವರು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಿಕ್ಷಕಿ ದೀಪಿಕಾ ಜಯದೇವ ಸ್ವಾಮಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜೋರಾ ಸ್ವಾಗತಿಸಿ, ಅಂಕಿತ ನಿರೂಪಿಸಿ, ಶಿಕ್ಷಕಿ ನಿವೇದಿತಾ ವಂದಿಸಿದರು.