ಮಡಿಕೇರಿ, ಆ. ೩೧: ನೆಹರೂ ಯುವಕೇಂದ್ರ ಮಡಿಕೇರಿ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ತಾಲೂಕು ಯುವ ಒಕ್ಕೂಟ ಹಾಗೂ ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ೪೯ನೇ ವರ್ಷದ ಕೈಲ್‌ಪೊಳ್ದ್ ಕ್ರೀಡಾಕೂಟ ತಾ. ೩ರಂದು ನಡೆಯಲಿದೆ.

ಸಂಘದ ಆಟದ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ, ವಿವಿಧ ವಿಭಾಗದ ಓಟಗಳು, ಭಾರದ ಕಲ್ಲು ಎಸೆತ, ಹಗ್ಗ ಎಳೆಯುವುದು, ಸೂಜಿ - ನೂಲಿನ ಓಟ, ವಾಲಗದ ಕುಣಿತ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ಸಿನಿಮಾನಟ ಚೆಟ್ಟಿಮಾಡ ಕೆ. ಅಭಿಷೇಕ್ ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೆಟ್ಟಿಮಾಡ ಎಸ್. ಬಾಲಕೃಷ್ಣ ವಹಿಸಲಿದ್ದು, ಅತಿಥಿಗಳಾಗಿ ರಾಜೀವ ಬಿ.ಜೆ., ನಿವೃತ್ತ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಅಮ್ಮಣಂಡ ಯು. ಪೂಣಚ್ಚ, ಮೈಸೂರು ಕಲ್ಯಾಣಗಿರಿ ಉದ್ಯಮಿ ಮೇಕಂಡ ಬಿ. ಅಚ್ಚಯ್ಯ, ಹೊದ್ದೂರು ಹೋಂ ಸ್ಟೇ ಮಾಲೀಕ ಪಟ್ರಕೋಡಿ ಎಂ. ವಾಸುದೇವ, ಕೊಡಗು ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಮೇಕಂಡ ದೊರೆ ತಮ್ಮಯ್ಯ ತಿಳಿಸಿದ್ದಾರೆ.