ಮಡಿಕೇರಿ, ಸೆ. ೧: ಹಾಕಿ ಇಂಡಿಯಾದ ವಾರ್ಷಿಕ ಮಹಾಸಭೆ ಇಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಜರುಗಿತು. ಸಭೆಯಲ್ಲಿ ಹಾಕಿ ಇಂಡಿಯಾದ ಮುಂದಿನ ಬೆಳವಣಿಗೆ ಕಾರ್ಯಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.

ಮುಖ್ಯ ಅತಿಥಿಗಳಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಹಾಕಿ ಇಂಡಿಯಾ ಹಾಗೂ ವಿವಿಧ ರಾಜ್ಯಗಳ ಘಟಕದ ಪದಾಧಿಕಾರಿಗಳನ್ನು ಗೌರವಿಸಲಾಗಿದ್ದು, ಹಾಕಿ ಕರ್ನಾಟಕದ ಸೆಕ್ರೆಟರಿ ಜನರಲ್ ಆಗಿರುವ ಮಾಜಿ ಒಲಂಪಿಯನ್ ಡಾ. ಎ.ಬಿ. ಸುಬ್ಬಯ್ಯ ಅವರು ಗೌರವ ಸ್ವೀಕರಿಸಿದರು.