ಗೋಣಿಕೊಪ್ಪ, ಸೆ. ೧: ಗೋಣಿಕೊಪ್ಪ ಲಯನ್ಸ್ ಕ್ಲಬ್‌ಗೆ ವಲಯ ಅಧ್ಯಕ್ಷರಾದ, ಹಿರಿಯ ವಕೀಲ ಪಿರಿಯಾಪಟ್ಟಣ ಲಯನ್ಸ್ ಕ್ಲಬ್‌ನ ಕೆ.ಎ. ಮಹಾದೇವಪ್ಪ ಭೇಟಿಕೊಟ್ಟರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲಾ ಕಡೆಗಳಲ್ಲಿಯೂ ಲಯನ್ಸ್ ಸದಸ್ಯರು ಕ್ರಿಯಾಶೀಲರಾಗಿ ಜನಪರವಾದ ಕಾರ್ಯ ಮಾಡುವ ಮೂಲಕ ಸೇವಾ ಮನೋಭಾವ ಎತ್ತಿ ಹಿಡಿಯುವಂತಾಗಬೇಕು ಎಂದರು.

ಇದೇ ಸಂದರ್ಭ ಸುವರ್ಣ ಮಹೋತ್ಸವ ಆಚರಿಸಿರುವ ಗೋಣಿಕೊಪ್ಪ ಸಂಸ್ಥೆಯು ಸವಿನೆನಪಿಗಾಗಿ ಹೊರತಂದಿರುವ ಕಾಫಿ ಟೇಬಲ್ ಪುಸ್ತಕವನ್ನು ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಕ್ಲಬ್‌ನ ಅಧ್ಯಕ್ಷ ಚೆಟ್ಟಿಮಾಡ ಅಪ್ಪಣ್ಣ, ಕಾರ್ಯದರ್ಶಿ ಪಟ್ರಂಗಡ ಶ್ರೀಮಂತ್, ಖಜಾಂಚಿ ಮಂಡೇಪAಡ ಸಚಿನ್ ಹಾಗೂ ಸರ್ವ ಸದಸ್ಯರು ಇದ್ದರು ಅಪ್ಪಣ್ಣ ಸ್ವಾಗತಿಸಿ, ಶ್ರೀಮಂತ್ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಕೈಬುಲಿರ ಚೇತನ್ ವಂದಿಸಿದರು.