ಸಿದ್ದಾಪುರ, ಸೆ. ೧: ಎಸ್ಎನ್ಡಿಪಿ ಜಿಲ್ಲಾ ಯೂನಿಯನ್ಗೆ ಆಂಬ್ಯುಲೆನ್ಸ್ ನೀಡುವಂತೆ ಯೂನಿಯನ್ ವತಿಯಿಂದ ಸಿದ್ದಾಪುರದ ಆರೆಂಜ್ ಕೌಂಟಿ ಸಂಸ್ಥೆಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಆರೆಂಜ್ ಕೌಂಟಿ ಸಂಸ್ಥೆಯವರು ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ದಿನಾಚರಣೆಯ ಸಮಾರಂಭದಲ್ಲಿ ಆರೆಂಜ್ ಕೌಂಟಿ ಸಂಸ್ಥೆಯ ಮುಖಾಂತರ ಇವಾಲ್ವಾ ಬ್ಯಾಕ್ ರೆಸಾರ್ಟ್ ವತಿಯಿಂದ ಸಂಸ್ಥೆಯ ವ್ಯವಸ್ಥಾಪಕರಾದ ಥೋಮಸ್ ಪೌಲ್ ಅವರು ಎಸ್ಎನ್ಡಿಪಿ ಸಂಘಟನೆಗೆ ಆಂಬ್ಯುಲೆನ್ಸ್ ಖರೀದಿಸಲು ರೂ. ೧೫,೫೫೦೦೦ ಚೆಕ್ಕನ್ನು ದೇಣಿಗೆಯಾಗಿ ಎಸ್ಎನ್ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಅವರ ಸಮ್ಮುಖದಲ್ಲಿ ನೀಡಿದರು.