ಮಡಿಕೇರಿ, ಸೆ. ೨: ಜಿಲ್ಲೆಯ ಹಿರಿಯ ದಾನಿಗಳಾದ ಕೈಬಿಲಿರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ದಿವಂಗತ ಕೈಬಿಲಿರ ಬೋಪಯ್ಯ ಅವರ ಜ್ಞಾಪಕಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ. ೫೦,೦೦೦ ದತ್ತಿನಿಧಿ ಸ್ಥಾಪಿಸಿದ್ದಾರೆ.

ಕೊಡಗು ಜಿಲ್ಲೆಯ ೧೦ನೇ ತರಗತಿಯ ಕನ್ನಡ ವಿಷಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಬಹುಮಾನ ಕೊಡುವುದು ದತ್ತಿಯ ಉದ್ದೇಶವಾಗಿದೆ.

ದತ್ತಿಯ ಮೊತ್ತದ ಚೆಕ್‌ಅನ್ನು ಕೈಬಿಲಿರ ಪಾರ್ವತಿ ಬೋಪಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.