ನಾಪೋಕ್ಲು, ಸೆ. ೧: ಸಮೀಪದ ಕಿರುಂದಾಡು ಗ್ರಾಮದ ಕಿಸಾನ್ ಯೂತ್ ಕ್ಲಬ್ ವತಿಯಿಂದ ನಾಲ್ಕನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ತಾ ೩ರಂದು ಮಧ್ಯಾಹ್ನ ೨ ಗಂಟೆಗೆ ಕಿರುಂದಾಡು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಕಿಸಾನ್ ಯೂತ್ ಕ್ಲಬ್ ಅಧ್ಯಕ್ಷ ತಾಪಂಡ ವಿಜು ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಲಿಮಿಟೆಡ್‌ನ ನಿವೃತ್ತ ಸ್ಪೆಷಲ್ ಗ್ರೇಡ್ ಅಧಿಕಾರಿ ದೇವಜನ ಸುಬ್ಬಯ್ಯ ವೆಂಕಟೇಶ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.