ಮಡಿಕೇರಿ, ಸೆ. ೨: ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ವತಿಯಿಂದ ರಾಷ್ಟಿçÃಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮೂವರು ಕ್ರೀಡಾಪಟು ಗಳನ್ನು ಸನ್ಮಾನಿಸ ಲಾಯಿತು. ಹಾಕಿ ಕ್ರೀಡೆಯಲ್ಲಿ ಉದಯೋನ್ಮುಖ ಪ್ರತಿಭೆ ದೇಚಕ್ಕ ಎಸ್.ಕೆ., ರಾಷ್ಟಿçÃಯ ಹಾಕಿ ತೀರ್ಪುಗಾರ ಅಯ್ಯಪ್ಪ, ಸೆಸ್ಟೋಬಾಲ್ ಕ್ರೀಡೆಯಲ್ಲಿ ಭಾರತದ ನಾಯಕತ್ವ ವಹಿಸಿದ ಮಹಮ್ಮದ್ ಶಾಹಿಲ್ ಸನ್ಮಾನಕ್ಕೆ ಪಾತ್ರರಾದರು.

ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್ ಮಾತನಾಡಿ, ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ ಅನೇಕ ಕ್ರೀಡಾಪಟು ಗಳು ಜಿಲ್ಲೆಯಲ್ಲಿದ್ದಾರೆ. ಈ ಬಾರಿಯಿಂದ ಪ್ರತಿಭೆಗಳನ್ನು ಹುಡುಕಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಸನ್ಮಾನ ಮಾಡಲಾಗುತ್ತಿದೆ ಎಂದರು.

ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್, ಭಗತ್ ರಾಜ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ಬಾಲ ಸುಬ್ರಮಣ್ಯ, ಲೋಕೇಶ್, ಜಹೀರ್ ಅಹ್ಮದ್, ಪವನ್, ಧನಂಜಯ ಶಾಸ್ತಿçÃ, ಬೋಪಣ್ಣ, ಪದ್ಮಾಗಿರಿ, ಪ್ರಮಿಳಾ ಶೆಟ್ಟಿ, ರವಿಕುಮಾರ್ ಹಾಜರಿದ್ದರು.