ಶನಿವಾರಸಂತೆ, ಸೆ. ೪: ಸೋಮವಾರ ರಾತ್ರಿ ಸುರಿದ ಮಳೆ-ಗಾಳಿಯ ಅಬ್ಬರಕ್ಕೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಳ್ಳಿ ಗ್ರಾಮದ ಆರ್. ಎಸ್.ಸುರೇಶ್ ಅವರ ಮನೆ ಗೋಡೆಗಳು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತಾ, ಶನಿವಾರಸಂತೆ ಕಂದಾಯ ಇಲಾಖೆ ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಚಂದನ್, ಗೌಡಳ್ಳಿ ಗ್ರಾಮ ಆಡಳಿತ ಸಹಾಯಕ ಅಧಿಕಾರಿ ಯೋಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಹಾರ ಕಿಟ್ ವಿತರಿಸಿದ್ದಾರೆ.