ಶನಿವಾರಸಂತೆ, ಸೆ. ೪: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶನಿವಾರಸಂತೆ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಡಿ.ಆರ್. ಅನೀಶ್ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ತಾ. ೧೪ ರಿಂದ ೧೬ ರವರೆಗೆ ಮೈಸೂರಿನಲ್ಲಿ ನಡೆಯಲಿರುವ ೧೦೦ ಮೀಟರ್ ಹರ್ಡಲ್ಸ್, ಎತ್ತರ ಜಿಗಿತ, ೨೦೦ ಮೀಟರ್ ಓಟ, ಉದ್ದ ಜಿಗಿತ, ಜಾವೆಲಿನ್ ಥ್ರೋ ಹಾಗೂ ಸಾವಿರ ಮೀಟರ್ ಓಟ - ಈ ಪಂದ್ಯಾವಳಿಗಳನ್ನು ಒಳಗೊಂಡ ಹೆಪ್ಟತ್ಲಾನ್ ಅಂಡರ್ ೧೮ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟು ಡಿ.ಆರ್. ಅನೀಶ್ ಭಾಗವಹಿಸಲಿದ್ದಾರೆ.

ಕಳೆದ ಸಾಲಿನಲ್ಲಿ ಅಸ್ಸಾಂನಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದ ಅನೀಶ್ ದೊಡ್ಡಮಳ್ತೆ ಗ್ರಾಮದ ಡಿ.ಬಿ. ರಾಜೇಶ್-ವಿಮಲಾ ದಂಪತಿಯ ಪುತ್ರ.